ಹಾಲ್ದಾರ್ ನಾಗ್ ಎಂಬುವವರು 2016 ರಲ್ಲಿ ಇವರು ಸ್ವತಃ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ದೇಶದ ಉನ್ನತ ಬಿರುದಾದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜಿನಾದವರು. ಪ್ರಶಸ್ತಿ ಸ್ವೀಕಾರ ಮಾಡುವ ಸಮಯದಲ್ಲಿ ಒಂದು ಪ್ರಸಂಗ ಜರುಗಿತು. ಇದನ್ನು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.
2016 ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವ ಸಂಗತಿ ತಿಳಿದಾಗ ಅದನ್ನು ಸ್ವೀಕಾರ ಮಾಡುವುದಕ್ಕೆ ದೆಹಲಿಗೆ ಹೋಗಬೇಕಾಯಿತು. ಆದರೆ ಅವರಿಗೆ ಅಲ್ಲಿಗೆ ಹೋಗುವುದಕ್ಕೆ ಗೊತ್ತಿರಲಿಲ್ಲ ಮತ್ತು ಹಣ ಕೂಡ ಇಲ್ಲ ಎಂದು ಕೇಳಿಕೊಂಡಾಗ, ಅಲ್ಲಿನ ಒರಿಸ್ಸಾ ಸರ್ಕಾರವೆ ದೆಹಲಿಗೆ ಫ್ಲೈಟ್ ವೆಚ್ಚವನ್ನು ಭರಿಸಿ ಕಳುಹಿಸಿಕೊಡುತ್ತದೆ.ಅವರ ಮಾರ್ಗದರ್ಶನದಂತೆ ವಿಮಾನದಲ್ಲಿ ದೆಹಲಿಗೆ ಹಾಲ್ದಾರ್ ಬಂದು ಇಳಿಯುತ್ತಾರೆ. ಅವರ ಕೈಯಲ್ಲಿ ಪ್ರಶಸ್ತಿ ಪತ್ರಗಳು ಇದ್ದವು.ದೆಹಲಿಗೆ ಅವರು ಬರುವ ಸುದ್ದಿ ಹೋಗಿ ಅವರನ್ನು ನಿಲ್ದಾಣದಲ್ಲಿ ಸ್ವಾಗತಿಸುವುದಕ್ಕೆ ಏರ್ಪಡಿಸಲಾಗಿತ್ತು.
ಹಾಲ್ದಾರ್ ಅಲ್ಲಿ ಹೋಗಿ ಇಳಿದಾಗ ಅವರ ಹತ್ತಿರ ಯಾರು ಬರಲಿಲ್ಲ.ಯಾಕೇಂದರೆ ಇವರೇ ಪದ್ಮಶ್ರೀ ವಿಜೇತರು ಎಂಬ ಕಲ್ಪನೆ ಯಾರಿಗೂ ಸಹ ಇರಲಿಲ್ಲ. ಕಾರಣ ಹಾಲ್ದಾರ್ ಅವರ ವೇಷ ಭೂಷಣವೇ ಆ ರೀತಿ ಇತ್ತು.ಆಗ ಹಾಲ್ದಾರ್ ಅವರೇ ಆಟೋ ಮಾಡಿಕೊಂಡು ಅಶೋಕ ಹೋಟಲ್ ಬಳಿ ಬಂದು ಇಳಿಯುತ್ತಾರೆ.ಸಾಮಾನ್ಯವಾಗಿ ಪದ್ಮಶ್ರೀ ವಿಜೇತರಿಗೆ ನೆಲೆಸುವುದಕ್ಕೆ ರೂಮ್ ವ್ಯವಸ್ಥೆ ಕೇಂದ್ರ ಮಾಡಿರುತ್ತದೆ. ಅದೇ ರೀತಿ ಹಾಲ್ದಾರ್ ಕೂಡ ಒಂದು ರೂಮ್ ರಿಸರ್ವ್ ಮಾಡಲಾಗಿತ್ತು.ಹಾಲ್ದಾರ್ ಆಟೋ ಇಳಿದು ಬರುವಾಗ ಗೇಟ್ ಹತ್ತಿರ ಸೆಕ್ಯೂರಿಟಿ ಅವರು ಒಳಗೆ ಬಿಡುವುದಕ್ಕೆ ನಿರಾಕರಿಸಿದರು.
ಅವರ ವೇಷ ಭೂಷಣ ಕೂಡ ತುಂಬಾ ವಿಚಿತ್ರವಾಗಿ ಇತ್ತು ಹಾಗೂ ಕಾಲಿಗೆ ಚಪ್ಪಲಿ ಕೂಡ ಇರಲಲಿಲ್ಲ.ಅವರು ಒರಿಸ್ಸಾ ಆಗಿರುವುದರಿಂದ ದೆಹಲಿಯ ಹಿಂದಿ ಸರಿಯಾಗಿ ಬರುತ್ತಿರಲಿಲ್ಲ.ಹಾಲ್ದಾರ್ ಎಷ್ಟೇ ಕೇಳಿಕೊಂಡರು ಅವರನ್ನು ಒಳಗಡೆ ಬಿಡಲಿಲ್ಲ.VVIP ವಾಹನ ಒಳಗೆ ಹೋಗುವಾಗ ಹಾಲ್ದಾರ್ ಅವರನ್ನು ಯಾರೋ ಸರ್ ಎಂದು ಕೂಗುತ್ತಾರೆ. ಅವರು ಐಎಎಸ್ ಅಧಿಕಾರಿ ಆಗಿರುವ ಅರವಿಂದ್ ಎಂಬುವವರು. ಹೋಟಲ್ ಬಳಿ ನಡೆದಿರುವುದನ್ನು ಗಮನಿಸಿದರು. ನಂತರ ಸೆಕ್ಯೂರಿಟಿಯವರ ಮೇಲೆ ಸಿಟ್ಟು ಮಾಡಿಕೊಂಡರು.ನಂತರ ಕೇಂದ್ರಕ್ಕೆ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಮಹಾಕವಿ ಇವರು ಎಂದು ಪರಿಚಯ ಮಾಡಿಸಿ ಅವರ ಹತ್ತಿರ ಕ್ಷಮೆ ಕೇಳುವಂತೆ ಸೆಕ್ಯೂರಿಟಿ ಅವರಿಗೆ ಆದೇಶ ಮಾಡಿದರು.
ಆಗ ಹಾಲ್ದಾರ್ ಅವರು ನನ್ನ ಗುರುತು ಅವರಿಗೆ ಸಿಕ್ಕಿಲ್ಲ ಅವರದ್ದು ಏನು ತಪ್ಪಿಲ್ಲ ಎಂದು ನಕ್ಕರು.ನಂತರ ಹಾಲ್ದಾರ್ ಅವರಿಗೆ ಯಾವುದೇ ಅವಮಾನ ಆಗದಂತೆ ಎಲ್ಲಾ ಸೌಕರ್ಯ ಕೊಡುವಂತೆ ಹೇಳಿ ನಂತರ ಅವರ ಬಳಿ ಫೋಟೋ ತೆಗೆಸಿಕೊಂಡು ಹೋಗುತ್ತಾರೆ.ಅಷ್ಟೇ ಅಲ್ಲದೆ ದೆಹಲಿಯಲ್ಲಿ ಪ್ರಶಸ್ತಿ ಪುರಸ್ಕಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ವೇಷ ಭೂಷಣವನ್ನು ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದರು.ಇಂತಹ ಉನ್ನತ ಪ್ರಶಸ್ತಿಗೆ ಬರುವವರು ಎಷ್ಟು ಟಿಪ್ ಟಾಪ್ ಆಗಿ ಬರುತ್ತಾರೆ.ಆದರೆ ಇವರನ್ನು ನೋಡಿ ಯಾವ ಕಾರ್ಯಕ್ಕೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತು ಎಂದು ಅನುಮಾನಪಟ್ಟಿದ್ದರು.
ಅವರು ಒಬ್ಬ ಮಹಾಕಾವಿ ಎಂದು ಪುರಸ್ಕಾರ ದೊರೆಕಿದ್ದು. ಹಾಲ್ದಾರ್ ಅವರನ್ನು ನೋಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಒಂದು ಕ್ಷಣ ಬೆರಗಾಗಿದ್ರು.ಈ ಹಾಲ್ದಾರ್ ಯಾರು? ಅವರಿಗೆ ಏಕೆ ಪ್ರಶಸ್ತಿ ಸಿಕ್ಕಿತ್ತು ಎಂದು ತಿಳಿದು ಇಡೀ ದೇಶವೇ ಮೂಕವಿಸ್ಮಿತಗೊಂಡಿತ್ತು.
ಹಾಲ್ದಾರ್ ಒಬ್ಬ ಸರಳ ಜೀವಿ.ಅವರ ಜೀವನ ಮತ್ತು ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಆಗುತ್ತದೆ.ಸಾಮನ್ಯವಾಗಿ ಎಲ್ಲರು ಯಶಸ್ವಿ ಆಗಬೇಕು ಎಂದು ಆಸೆ ಹೊಂದಿರುತ್ತಾರೆ.ಹಾಲ್ದಾರ್ ದೇಶದ ಒಬ್ಬ ವಿಶಿಷ್ಟ ಕವಿ. ಇವರು 3 ನೇ ತರಗತಿ ಓದಾದ ಅವರ ಪದ ಬಂಡಾರ ಅಪೂರ್ವವಾದದ್ದು.ಬಿಬಿವಿಸಿ ಅವರು ವರದಿ ಮಾಡಿ ಅದೇ ಸಮಯದಲ್ಲಿ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿದೆ.ಹಾಲ್ದಾರ್ ಅವರು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು 5 ಸೋದರರು ಮತ್ತು ಒಬ್ಬ ಸೋದರಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು.ಕಡು ಬಡತನ ಇರುವುದರಿಂದ ಎರಡು ಹೊತ್ತು ಊಟಕ್ಕೂ ಕಷ್ಟ ಇತ್ತು.ಜೀವನಕ್ಕಾಗಿ ಬರ್ಗರ್ ಟೌನ್ ಗೆ ಬಂದು ಅಲ್ಲಿ ಇದ್ದ ಹೋಟಲ್ ನಲ್ಲಿ ಲೋಟ ಮತ್ತು ಬಾತ್ ರೂಮ್ ತೊಳೆಯುತ್ತಿದ್ದರು.
ಹಾಲ್ದಾರ್ ಅವರಿಗೆ ಅಲ್ಲಿ ಇರುವುದಕ್ಕೆ ಇಷ್ಟ ಇರಲಿಲ್ಲ. ಊರಿಗೆ ವಾಪಾಸ್ ಬಂದರು ಆದರೆ ಊಟಕ್ಕೂ ಸಹ ಇರದೇ ಯಾರೋ ಒಬ್ಬರು ಅವರನ್ನು ರೆಸಿಡೆನ್ಸಿಯಲ್ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸದವರಗಿ ಸೇರಿಸುತ್ತಾರೆ.ಅವರ ಕವಿತೆಗೆ ಅಲ್ಲಿ ಅವರಿಗೆ ತುಂಬಾ ಒಳ್ಳೆಯದಾಯಿತು.ಪದ್ಯಗಳ ಬಗ್ಗೆ ತುಂಬಾನೇ ಆಸಕ್ತಿ ಇದ್ದ ಹಾಲ್ದಾರ್ ಅವರಿಗೆ ಅಲ್ಲಿನ ಮಕ್ಕಳ ಪುಸ್ತಕಗಳನ್ನು ಓದುತಿದ್ದರು.ಗೊತ್ತಿಲ್ಲದೇ ಇರುವುದನ್ನು ಮಕ್ಕಳಲ್ಲಿ ತಿಳಿದುಕೊಂಡು ಪದ್ಯಗಳನ್ನು ಸಂಗ್ರಹಿಸಿ ಇಡುತಿದ್ದರು.ಈ ಸಮಯದಲ್ಲಿ ಅಲ್ಲಿಯೂ ಅವರನ್ನು ಕೆಲಸದಿಂದ ತೆಗೆಯುತ್ತಾರೆ. ನಂತರ ಬ್ಯಾಂಕ್ ಉದ್ಯಮಿ ಕೊಟ್ಟ ಹಣದಿಂದ ಸಣ್ಣ ಶಾಪ್ ತೆರೆಯುತ್ತಾರೆ.ಸಾಂಬಾರ್ ಪುರಿ ಭಾಷೆಯಲ್ಲಿ ಕವನ ಬರೆದರೂ.
ಬೇರೊಬ್ಬರ ಸಹಾಯದಿಂದ ಹಾಲ್ದಾರ್ ಅವರ ಕವಿತೆಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ಅವರು ಜನರ ಮನ್ನಣೆ ಗಳಿಸಿದರು.ಅವರ ಬರಹಗಳು ಯಾವ ರಾಷ್ಟ್ರ ಕವಿಗೂ ಕಡಿಮೆ ಇಲ್ಲ ಎಂದು ಹೇಳುತ್ತಿದ್ದರು.ಅವರು ಬರೆಯುವ ರೀತಿ ಒರಿಸ್ಸಾದಲ್ಲಿ ತುಂಬಾ ಪ್ರಕಟವಾದವು. ಅವರ ಕವಿತೆಯನ್ನು ಮೆಚ್ಚಿ ಎಡಿಟರ್ ಗಳು ಇನ್ನು ಬರೆಯುವುದಕ್ಕೆ ಒತ್ತಾಯ ಮಾಡಿದರು. ನಂತರ ಕವಿತೆ ಬರೆಯುವುದಕ್ಕೆ ಹಣ ಕೊಡುತ್ತಿದ್ದರು. ಹೀಗೆ ಎಡಿಟರ್ ಅವರ ಹತ್ತಿರ ಬಂದು ಅವರನ್ನು ನೋಡಿ ಶಾಕ್ ಆಗುತ್ತದೆ. ನಂತರ ಅವರಿಗೆ 10000 ಅಡ್ವಾನ್ಸ್ ಕೊಟ್ಟು ನೀವು ಬರೆಯುವ ಎಲ್ಲಾ ಕವಿತೆ ಒಂದು ಪುಸ್ತಕದಲ್ಲಿ ಪ್ರಕಟ ಮಾಡುತ್ತೇನೆ ಹಾಗೂ ಬರುವ ಹಣದಲ್ಲಿ 25% ನಿಮಗೆ ಕೊಡುತ್ತೇನೆ ಎಂದು ಹೇಳಿದಾಗ ಹಾಲ್ದಾರ್ ಹ್ಮ್ ಎಂದು ಹೇಳುತ್ತಾರೆ.ಈ ರೀತಿ ಪ್ರಕಟವಾದ ಪುಸ್ತಕ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿತು.ಆದರು ಅವರು ಸರಳ ಜೀವನವನ್ನು ನಡೆಸುತ್ತಿದ್ದಾರೆ. ಪತ್ನಿಯ ಕೋರಿಕೆಯಂತೆ ಸಣ್ಣ ಮನೆಯನ್ನು ಮಾಡಿಕೊಂಡಿದ್ದಾರೆ.