Kannada News ,Latest Breaking News

ಈ 1 ಚೂರ್ಣದಿಂದ ಎಷ್ಟೆಲ್ಲ ಕಾಯಿಲೆಗಳು ವಾಸಿಯಾಗುತ್ತದೆ ಗೊತ್ತಾ?ಯಾರು ಬೇಕಾದರೂ ಇದನ್ನು ಕುಡಿಯಬಹುದು!

0 4

Get real time updates directly on you device, subscribe now.

ಅಶ್ವಗಂಧ ಲೈಂಗಿಕ ನಿರಾಸಕ್ತಿಯನ್ನು ಸರಿಪಡಿಸುತ್ತದೆ ಎಂದು ಮಾತ್ರ ನಿಮಗೆ ತಿಳಿದಿದೆ ಆದರೆ
ಅಶ್ವಗಂಧದ ಇನ್ನೊಂದು ಮುಖದ ಬಗ್ಗೆ ನಿಮಗೆ ಗೊತ್ತಾ ಬನ್ನಿ ತಿಳಿಯೋಣ..

ಅಶ್ವಗಂಧ

ಮದ್ದಿಲ್ಲದ ರೋಗಕ್ಕೆ ಹಿರೇಮದ್ದಿನ ಬೇರು ಎಂಬ ನಾಡ್ನುಡಿ ಬಹುಕಾಲದಿಂದಲೂ ಪ್ರಚಲಿತವಿದ್ದು ಚಿಕಿತ್ಸಾ ದೃಷ್ಟಿಯಿಂದ ಹಿರೇಮದ್ದು ಅಂದರೆ ಅಶ್ವಗಂಧದ ಬೇರು ಅತ್ಯಂತ ಸೂಕ್ತವಾಗಿದೆ.

ಜನರನ್ನು ಕಾಡುತ್ತಿರುವ ಇಂದಿನ ಮದ್ದಿಲ್ಲದ ಸೋಂಕಿಗೆ ಅಶ್ವಗಂಧ ಒಂದು ಶ್ರೇಷ್ಠ ಉಪಾಯವಾಗಬಲ್ಲದು. ಗಿಡಮೂಲಿಕೆಗಳಲ್ಲೇ ಅತ್ಯಂತ ಹೆಚ್ಚು ಅಲಕಲಾಯಿಡ್ಸ್ ಗಳನ್ನು ಹೊಂದಿರುವ ಅಶ್ವಗಂಧವು ಮೂರು ಕೆಲಸವನ್ನು ಒಟ್ಟಿಗೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಊತನಾಶಕ ದ್ರವ್ಯವು ಹೊಂದಿರದ ಪೋಷಕ ಗುಣವನ್ನು ಅಶ್ವಗಂಧವು ಹೊಂದಿದೆ.

ಶರೀರದ ಎಲ್ಲಾ ಅವಯವಗಳ ಎಲ್ಲಾ ಸ್ಥರಗಳಲ್ಲೂ ಪೋಷಕವಾಗಿ ಕಾರ್ಯನಿರ್ವಹಿಸುವಷ್ಟು ಗುಣವನ್ನು ಹೊಂದಿದ್ದರೂ ಅನಗತ್ಯ ಊತವನ್ನು ತನ್ನ ಪೋಷಕ ಶಕ್ತಿಯಿಂದಲೇ ನಿವಾರಿಸುತ್ತದೆ.ಆದ್ದರಿಂದ ಇದು ಊತನಿವಾರಕವೂ, ಪೋಷಕವೂ ಆಗಿದೆ.

ಅಶ್ವಗಂಧದಲ್ಲಿ ವಾತ ಮತ್ತು ಕಫವನ್ನು ಏಕಕಾಲಕ್ಕೆ ಸಮರ್ಥವಾಗಿ ನಿರ್ವಹಿಸುವ ಅನೇಕ ರಾಸಾಯನಿಕಗಳಿದ್ದು, ಪೋಷಣ ಅಭಾವದಲ್ಲೂ ಮತ್ತು ಅನಿಯಂತ್ರಿತ ಅಧಿಕ ಪೋಷಣೆಯಲ್ಲೂ ಆಗುವ ವಿಕಾರಗಳನ್ನು ಏಕ ಕಾಲಕ್ಕೆ ಸಮತೋಲನಕ್ಕೆ ತರುತ್ತದೆ.

ಅವಯವಗಳಿಗೆ ಗಡಸುತನವನ್ನು ಕೊಟ್ಟು ಅವು ಬಿಗಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ಯಾಲ್ಸಿಯಂ ಅತ್ಯಗತ್ಯ. ಆದರೆ ಇದು ಅತ್ಯಂತ ಸಮತೊಲನ ಸ್ಥಿತಿಯಲ್ಲಿ ಇರಬೇಕಾಗುತ್ತದೆ. ಅಂದರೆ-
ಕ್ಯಾಲ್ಸಿಯಂ ಕಣವು ಹೃದಯದ ಮಾಂಸಖಂಡಗಳಿಗೆ, ಪುಪ್ಪುಸದ ಸ್ನಾಯುಗಳಿಗೆ, ರಕ್ತನಾಳಗಳಿಗೆ, ಶರೀರದ ಮಾಂಸಖಂಡಗಳಿಗೆ ಮತ್ತು ಮೂಳೆಗಳಿಗೆ ಒಂದೇ ಸಾಂದ್ರತೆಯಲ್ಲಿ ಹಂಚಿಕೆಯಾಗಲಾರದು.

ಕ್ಯಾಲ್ಸಿಯಂನ ಈ ಹಂಚಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಲ್ಲಿ ಶರೀರವು ಅಗಾಧವಾದ ವೇದನೆಯನ್ನೋ, ಆಘಾತವನ್ನೋ, ಅಪಾಯವನ್ನೋ, ಮರಣವನ್ನೋ ತಂದೊಡ್ಡಬಲ್ಲದು.

ಪ್ರಸ್ತುತ ಸನ್ನಿವೇಶದಲ್ಲಿ ಪುಪ್ಪುಸದ ಸ್ನಾಯುಗಳ ಸಂಕೋಚ, ಅಲ್ಲಿನ ರಕ್ತನಾಳಗಳ ಸಂಕೋಚ ಮತ್ತು ಅದಕ್ಕೆ ಸಮಸಮವಾಗಿ ಹೃದಯ ಸ್ನಾಯುಗಳ ಸಂಕೋಚ ಈ ಮೂರರ ನಡುವಿನ ಆಘಾತಕಾರಿ ಅಸಮತೋಲನವೇ ಮರಣವನ್ನು ತರುತ್ತಿದೆ. ಏಕೆಂದರೆ, ಸೋಂಕಿಗೆ ಪ್ರತಿಕ್ರಿಯೆ ತೋರಲು ಪುಪ್ಪುಸವು, ಅದಕ್ಕೆ ಬಲವಾಗಿ ರಕ್ತವನ್ನು ಹರಿಸಲು ಪ್ರಯತ್ನಿಸುವ ಹೃದಯವು, ಆ ಒತ್ತಡವನ್ನು ತಾಳಿಕೊಳ್ಳದ ರಕ್ತನಾಳಗಳು ಸಂಕೋಚಗೊಂಡು ವ್ಯಕ್ತಿಯನ್ನು ಅಪಾಯಕ್ಕೆ ನೂಕುತ್ತವೆ.

ಅಶ್ವಗಂಧವು ತನ್ನ ಬಲಕಾರಕ ಗುಣದಿಂದ ಕ್ಯಾಲ್ಸಿಯಂ ಹಂಚಿಕೆಯನ್ನು ಜೀವಕೋಶಕಗಳ ಎಲ್ಲಾ ಸ್ಥರದಲ್ಲೂ ಸುಲಲಿತಗೊಳಿಸುವುದರಿಂದ ತೀವ್ರ ಸೋಂಕಿನ ಅವಸ್ಥೆಯಲ್ಲೂ ಸಹ ಜೀವಚೈತನ್ಯ ಅವಯವಾಗಳಾದ ಹೃದಯ-ಪುಪ್ಪುಸಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ ಆದ್ದರಿಂದ ಅಲ್ಲಿ ಊತವಾಗಲೀ, ಸಂಕೋಚವಾಗಲೀ ಉಂಟಾಗುವುದೇ ಇಲ್ಲ.ಹಾಗಾಗಿ ಸೋಂಕಿತ ವ್ಯಕ್ತಿಯು ಅಶ್ವಗಂಧವನ್ನು ನಿತ್ಯವೂ ಸೇವಿಸುತ್ತಿದ್ದರೆ ಮರಣದ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಬಹುದು.

ಧನ್ಯವಾದಗಳು.

Get real time updates directly on you device, subscribe now.

Leave a comment