Kannada News ,Latest Breaking News

ಯಾರ ಮನೆಯಲ್ಲಿ ಈ ಗಿಡ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸುತ್ತಾಳೆ!

0 24

Get real time updates directly on you device, subscribe now.

ಈ ಜಗತ್ತಿನಲ್ಲಿ ಸಸ್ಯಗಳಿಗೆ ತನ್ನದೇ ಆದಂತಹ ವಿಶಿಷ್ಟವಾದ ಸ್ಥಾನವಿದೆ .ಇಂತಹ ಸಸ್ಯಗಳನ್ನು ದೈವಕ್ಕೆ ಹೋಲಿಸಿದ್ದಾರೆ.ಇಂತಹ ದೈವತ್ವ ಹೊಂದಿದ ಒಂದು ವಿಶಿಷ್ಟವಾದ ಸಸ್ಯದ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ.ಈ ಸಸ್ಯದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆಯನ್ನು ಹೇಳ್ತೀವಿ ಮುಂದೆ ಓದಿ.

ಈ ಗಿಡವನ್ನು ಲೋಳೆಸರ ಅಥವಾ ಇಂಗ್ಲಿಷಿನಲ್ಲಿ ಆಲೋವೆರಾ ಎಂದು ಕರೆಯುತ್ತಾರೆ.ಈ ಗಿಡವು ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟಲಕ್ಷ್ಮಿ ತಾಂಡವ ಆಡುತ್ತಿರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ.ಈ ಲೋಳೆಸರದ ಮತ್ತೊಂದು ವಿಶೇಷತೆಯೆಂದರೆ ಒಂದೊಂದು ಮುಳ್ಳಿನಲ್ಲೂ ದೇವತೆಗಳ ವಾಸವಿರುತ್ತದೆ ಎಂದು ಪಂಡಿತರು ಹೇಳಿದ್ದಾರೆ.

ಇದು ಯಾರ ಮನೆಯ ಮುಂದೆ ಇರುತ್ತದೆಯೋ ಅವರ ಮನೆಯಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶ ವಾಗುವುದಿಲ್ಲ.ಈ ಗಿಡದ ಬೇರಿನಲ್ಲಿ ಎಂತಹ ಶಕ್ತಿ ಇದೆ ಎಂದರೆ ಇದು ಆ ಮನೆಯಲ್ಲಿ ಜಗಳ, ಮನಸ್ತಾಪ ಏನು ಬರದ ಹಾಗೆ ನೋಡಿಕೊಳ್ಳುತ್ತದೆ .

ಈ ಗಿಡವೂ ನೀರಿಲ್ಲದೆ ಬಿಸಿಲು ಇಲ್ಲದೆ ಗಾಳಿಯಲ್ಲಿಯೇ ಬದುಕಬಲ್ಲದು .ಅದು ಹೇಗೆಂದರೆ ಇದನ್ನು ಮನೆಯ ಪ್ರಧಾನ ದ್ವಾರದ ಮೇಲ್ಭಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡಮೇಲಾಗಿ ಕಟ್ಟಿದರೆ ಆ ಮನೆಗೆ ಲಕ್ಷ್ಮೀದೇವಿ ಬಹಳ ಸಂತೋಷ ವಾಗಿ ಬರುತ್ತಾಳೆ.

ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಅಲೋವೆರಾ ವನ್ನು ಬೆಳೆಸಬೇಕು ಇದರಿಂದ ವಿಶೇಷವಾದ ಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಸಿಗಲಿದೆ.ಮನೆಯಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸುತ್ತದೆ ಅಲೋವೆರಾವನ್ನು ಆಗ್ನೇಯ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಬೆಳೆಸಬಾರದು
ಇದರಿಂದ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ.ಮನೆಯಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚಾಗಲು ಆಲೋವೆರಾದ ಬೇರು ಮೇಲಗಡೆ ಮಾಡಿ ಗಿಡ ಕೆಳಗೆ ಬರುವಂತೆ ನೇತು ಹಾಕಬೇಕು.ಈ ಆಲೋವೆರಾವನ್ನು ಮನೆಯ ಬಾಗಿಲಿಗೆ ನೇತು ಹಾಕಬೇಕು.

ಇನ್ನು ಇದೇ ಬರುವ ಮಂಗಳವಾರದಂದು ಬೆಳಿಗ್ಗೆ 6 ಗಂಟೆಯಿಂದ 7 ಗಂಟೆ ಒಳಗೆ ಈ ಆಲೋವೆರಾ ಗಿಡವನ್ನು ಬಾಗಿಲಿಗೆ ನೇತು ಹಾಕುವುದರಿಂದ ನಿಮಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ.ಹಾಗೂ ಶನಿ ದೋಷ ನಿವಾರಣೆಯಾಗುತ್ತದೆ.ಹಣಕಾಸಿನ ಕಷ್ಟಗಳು ನಿವಾರಣೆಯಾಗುತ್ತದೆ.

ಶುಕ್ರವಾರದಂದು ಪ್ರದೋಷ ಕಾಲದಲ್ಲಿ ಲಕ್ಷ್ಮೀ ದೇವಿಗೆ ಲೋಳೆರಸದ ನೈವೇದ್ಯೆಯನ್ನು ಅರ್ಪಿಸಿ ಇದರಿಂದ ಲಕ್ಷ್ಮೀ ದೇವಿ ಸಂತೃಪ್ತಿ ಹೊಂದುತ್ತಾಳೆ.

ಧನ್ಯವಾದಗಳು.

Get real time updates directly on you device, subscribe now.

Leave a comment