ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಶುಗರ್ ಲೆವೆಲ್ ಎಷ್ಟಿರುತ್ತದೆ!ಶುಗರ್ ಎಂದರೇನು ಅಥವಾ ಮಧುಮೇಹ ಎಂದರೇನು?
ಇತ್ತೀಚಿನ ದಿನಗಳಲ್ಲಿ ಶುಗರ್ ಸಮಸ್ಸೆ ಹೆಚ್ಚಾಗುತ್ತಿದೆ. ಶುಗರ್ ಸಮಸ್ಸೆ ಸ್ವಲ್ಪ ಸಿಹಿ ತಿಂದರು ಸಾಕು ಶುಗರ್ ಜಾಸ್ತಿಯಾಯಿತು. ನಂತರ ವೈದ್ಯರು ಹೇಳಿದ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಮನುಷ್ಯನಲ್ಲಿ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತ ತನ್ನ ಜೀವನ ಪರ್ಯಾಂತ, ಈ ಕಾಯಿಲೆಯೊಂದಿಗೆ ಪರಿಸ್ಥಿತಿ ಎದುರಾಗುತ್ತದೆ. ಯಾವ ರೀತಿಯಲ್ಲಿ ಚಿಕಿತ್ಸೆ ಮಾಡಿದರೂ ಕೂಡ, ಅಷ್ಟು ಸುಲಭವಾಗಿ ಈ ಕಾಯಿಲೆ ಮನುಷ್ಯನನ್ನು ಬಿಟ್ಟು ಹೋಗುವುದಿಲ್ಲ! ಆದರೆ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದೇ ಒಂದು ಸಮಾಧಾನಕರ ಸಂಗತಿ ಅಷ್ಟೇ.
ಇಂದು ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಾಗೂ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಾಗಿ, ಈ ಕಾಯಿಲೆ ಸುಲಭವಾಗಿ ಜನರನ್ನು ಆವರಿಸಿಕೊಂಡು ಬಿಡುತ್ತಿದೆ. ಅದರಲ್ಲೂ ಇನ್ನೂ ಆತಂಕಕಾರಿ ಸಂಗತಿ ಏನೆಂದರೆ, ವಯಸ್ಸು ಇನ್ನೂ 30 ದಾಟಿರುವುದಿಲ್ಲ, ಅದಾಗಲೇ ಇವರು ಮಧುಮೇಹ ಕಾಯಿಲೆಗೆ ತುಂಬಾ ಹತ್ತಿರವಾಗಿ ಬಿಡುತ್ತಾರೆ! ಇನ್ನೂ ಕೆಲವರಿಗೆ ಹುಟ್ಟುತ್ತಲೆ ಮಧುಮೇಹ ಸಮಸ್ಯೆ ಅನುವಂಶೀಯವಾಗಿ ಬಂದು ಬಿಡುತ್ತದೆ.
ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ಇರುವವರು, ಆದಷ್ಟು ತಮ್ಮ ಆಹಾರಕ್ರಮದಲ್ಲಿ ಕಡಿಮೆ ಕಾರ್ಬೋ ಹೈಡ್ರೇಟ್ ಅಂಶಗಳು ಮತ್ತು ಹೆಚ್ಚಿನ ಪ್ರಮಾಣದ ಒಳ್ಳೆಯ ಕೊಬ್ಬಿನಾಂಶ ಒಳಗೊಂಡ ಆಹಾರಗಳನ್ನು ಸೇವನೆ ಮಾಡಬೇಕು.
ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆ ಆಗದೆ, ಮಧುಮೇಹ ಕಾಯಿಲೆ ನಿಯಂತ್ರಣ ದಲ್ಲಿ ಇರಲು ನೆರವಾಗುತ್ತದೆ, ಎಂದು ಅಭಿಪ್ರಾಯ ಪಡುತ್ತಾರೆ. ಅಲ್ಲದೆ ಇದಕ್ಕೊಂದು ಒಳ್ಳೆಯ ಉದಾಹರಣೆಯಾಗಿ, ಪ್ರತಿದಿನ ಮುಂಜಾನೆ ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕೆಂದು ಕೂಡ ಸೂಚಿಸಿದ್ದಾರೆ.
ಕಡಿಮೆ ಕಾರ್ಬೋ ಹೈಡ್ರೇಟ್ ಮತ್ತು ಹೆಚ್ಚು ಕೊಬ್ಬಿನಾಂಶ ಹೊಂದಿದ ಬೇಯಿಸಿದ ಮೊಟ್ಟೆಯನ್ನು ಪ್ರತಿದಿನ ಸೇವನೆ ಮಾಡಿದವರಲ್ಲಿ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಕಂಡುಬಂದಿತು ಅಲ್ಲದೇ, ಮಧುಮೇಹ ಲಕ್ಷಣಗಳು ದಿನಾ ಹೋದ ಹಾಗೆ ನಿಯಂತ್ರಣಕ್ಕೆ ಬರುತ್ತಿರುವುದು ಕಂಡು ಬಂದಿತ್ತು. ಸಕ್ಕರೆ ಕಾಯಿಲೆ ಇದ್ದವರು ಹಾಗೂ ಇಲ್ಲದವರು, ಪ್ರತಿದಿನ ದಿನಕ್ಕೊಂದು ಬೇಯಿಸಿದ ಮೊಟ್ಟೆಯ ಜೊತೆಗೆ ಬೆಳಗಿನ ಬ್ರೇಕ್ ಫಾಸ್ಟ್ಗೆ ಪ್ರತಿದಿನ ಕಡಿಮೆ ಕಾರ್ಬೋಹೈಡ್ರೇಟ್ ಅಂಶಗಳನ್ನು ಹಾಗೂ ಒಳ್ಳೆಯ ಕೊಬ್ಬಿನಾಂಶ ಇರುವ ಆಹಾರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ವೃದ್ಧಿ ಆಗುವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದು, ಸಕ್ಕರೆ ಕಾಯಿಲೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು.