Importance of Mangalsutra:ಮಾಂಗಲ್ಯ ಮಂಗಳಸೂತ್ರ ಅಥವಾ ತಾಳಿ ಪದ ಗಳು ಬೇರೆ ಆದರೆ ಅರ್ಥ ಒಂದೇ. ಆದರೆ ಅದರ ಮಹತ್ವ ಏನು ಅಂತ ನಿಮಗೆ ಗೊತ್ತ ಇಲ್ವಾ? ಹಾಗಾದ್ರೆ ನೋಡೋಣ. ಮಂಗಳಸೂತ್ರ ಅಥವಾ ತಾಳಿ ಇದನ್ನ ವಿವಾಹಿತ ಸ್ತ್ರೀಯರು ಮಾತ್ರ ಧರಿಸುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದು ನಮ್ಮ ಹಿಂದೂ ಧರ್ಮ ದಲ್ಲಿ ಪಾಲಿಸಲಾಗುವ ಕಡ್ಡಾಯವಾದ ನಿಯಮ, ವಿವಾಹದ ಸಮಯ ದಲ್ಲಿ ವಧು-ವರ ಇಬ್ಬರು ಸೇರಿ ಒಂದು ಶಾಸ್ತ್ರ ವನ್ನ ಮುಗಿಸಿ ಆಶಾಸ್ತ್ರದಲ್ಲಿ ಬಂಧನಕ್ಕೆ ಒಳಗಾಗುತ್ತಾರೆ. ಆಗ ವರ ವಧುವಿನ ಕುತ್ತಿಗೆಗೆ ಮೂರು ಗಂಟು ಗಳನ್ನು ಹಾಕಿ ಕಟ್ಟುವ ಅರಿಶಿನದ ದಾರದಲ್ಲಿ ತಾಳಿಯನ್ನ ಅಥವಾ ಅರಿಶಿನದ ಕೊಂಬನ್ನ ಏರಿಸಿ ಕಟ್ಟ ಲಾಗುತ್ತದೆ. ಆಗ ಆ ತಾಳಿಯನ್ನು ಕಟ್ಟಿದ ನಂತರವೇ ಮದುವೆ ಶಾಸ್ತ್ರ ಮುಗಿಯಿತು ಎಂದು ಹೇಳ ಲಾಗುತ್ತದೆ.
ಸಕ್ಕರೆ ಕಾಯಿಲೆ ಇದ್ದವರು ದಯವಿಟ್ಟು ಈ ತಪ್ಪು ಯಾವುದೇ ಕಾರಣಕ್ಕೂ ಮಾಡಬೇಡಿ!
ಇನ್ನು ನಮ್ಮ ಹಿಂದೂ ಸಂಪ್ರದಾಯ ದಲ್ಲಿ ಮಂಗಳ ಸೂತ್ರಕ್ಕೆ ಇರುವ ಸ್ಥಾನ ಮಾನ ಮತ್ತು ವಿಶೇಷವಾದ ಮಹತ್ವ ಇಡೀ ಪ್ರಪಂಚ ಕ್ಕೆ ಅದೆಷ್ಟೋ ಜನರಿಗೆ ಆದರ್ಶ ವಾಗಿದೆ. ಅಲ್ಲದೇ ಮದುವೆಯಾದ ಸ್ತ್ರೀಯರ ಲ್ಲಿ ಅಂದ ರೆ ಸುಮಂಗಲಿಯರ ಲ್ಲಿ ಮಂಗಳ ಸೂತ್ರ ವು ಸಾಕಷ್ಟು ವಿಶೇಷವಾದ ಸ್ಥಾನಮಾನ ಪಡೆದುಕೊಂಡಿದೆ. ಇನ್ನು ಮಂಗಳ ಎಂದ ರೆ ಶುಭ ಅಥವಾ ಪವಿತ್ರವಾದದ್ದು ಅಂತ ಸೂತ್ರ ಎಂದ ರೆ ಪವಿತ್ರವಾದ ದಾರ ಹೀಗೆ ದಾರದಿಂದ ಬಂಧಿಸಲ್ಪಟ್ಟ ಗಂಟು ಎಂದು ಅರ್ಥ. ಒಟ್ಟಾರೆಯಾಗಿ ಮಂಗಳ ಸೂತ್ರ ಎಂದರೆ ಪವಿತ್ರವಾದ ಬಂಧನ ಅಥವಾ ಸಂಬಂಧಕ್ಕೆ ಒಳಪಟ್ಟವರು ವಧು-ವರರಿಬ್ಬರು ಅಂತ ತಿಳಿದುಕೊಳ್ಳಬೇಕು. ಶಕ್ತಿ ಸ್ವರೂಪಿಣಿಯಾದ ಸ್ತ್ರೀಯರ ಕುತ್ತಿಗೆಯ ಲ್ಲಿ ಇರುವ ಮಂಗಳ ಸೂತ್ರವೂ ತಮ್ಮ ಕುತ್ತಿಗೆಯ ಲ್ಲಿದ್ದರೆ ದುಷ್ಟ ಶಕ್ತಿಗಳಿಂದ ತಮ್ಮ ಪತಿ ಹಾಗೂ ಸಂಸಾರವನ್ನು ಅದು ರಕ್ಷಿಸುತ್ತದೆ ಎಂಬ ದೃಢ ವಾದ ನಂಬಿಕೆ ಹಾಗು ಭಕ್ತಿ ಭಾವನೆ ನಮ್ಮ ಧರ್ಮ ದಲ್ಲಿ ನೆಲೆಯೂರಿದೆ.
ಪತಿಯ ಆಯುಷ್ಯ ವಿಶೇಷವಾಗಿ ಹೆಚ್ಚಿಸುವ ಶಕ್ತಿ ಈ ಮಂಗಳಸೂತ್ರ ದಲ್ಲಿದೆ ಎಂದುರಿಸಲಾಗುತ್ತದೆ. ಅಂತಹ ಪವಿತ್ರವಾದ ಮಂಗಳ ಸೂತ್ರ ಕ್ಕೆ ಕೆಲವು ಮಹಿಳೆಯರು ಗೊತ್ತಿದ್ದು ಗೊತ್ತಿಲ್ಲದೆಯೂ ಬಟ್ಟೆಗೆ ಹಾಕುವ ಪಿನ್ ಅನ್ನು ಮಂಗಳಸೂತ್ರಕ್ಕೆ ಹಾಕಿಕೊಳ್ಳುತ್ತಾರೆ. ಹೀಗೆ ಕಬ್ಬಿಣ ದಿಂದ ಮಾಡಿದ ವಸ್ತು ಗಳಿಗೆ ಋಣಾತ್ಮಕ ಶಕ್ತಿಯನ್ನ ಸೆಳೆದು ಕೊಳ್ಳುವ ಶಕ್ತಿ ಇರುತ್ತದೆ. ಆದ್ದರಿಂದ ಮಂಗಳ ಸೂತ್ರದಲ್ಲಿರುವ ಒಳ್ಳೆಯ ಧನಾತ್ಮಕ ಶಕ್ತಿಗಳನ್ನು ಆ ಕಬ್ಬಿಣದ ವಸ್ತುಗಳು ಸೆಳೆದುಕೊಂಡು ತಾಳಿನನ್ನ ಬಲಹೀನ ಮಾಡುತ್ತದೆ. ಆದ್ದರಿಂದ ಪತಿಯ ಆರೋಗ್ಯ ದಲ್ಲಿ ಏರುಪೇರಾಗಿ ಆರೋಗ್ಯ ಹದಗೆಡುವ ಸಂಭವಗಳು ಕೂಡ ಇರುತ್ತವೆ.ಅದು ಅಲ್ಲದೆ ದಂಪತಿಗಳ ನಡುವೆ ಇರುವ ಉತ್ತಮ ಬಾಂಧವ್ಯ ಸಹ ಹಾಳಾಗುವ ಸಾಧ್ಯತೆಗಳಿದ್ದು, ವಿರಸ ಉಂಟಾಗುವ ಸಂಭವ ಗಳು ಹೆಚ್ಚಾಗಿರುತ್ತದೆ.
ಒಂದು ವೇಳೆ ಮಂಗಳ ಸೂತ್ರ ವನ್ನು ಬದಲಾಯಿಸ ಬೇಕೆಂದರೆ ಮೊದಲಿಗೆ ಅರಿಶಿನದ ದಾರದ ಜೊತೆ ತಾಳಿ ಯನ್ನು ಏರಿಸಿ ಕುತ್ತಿಗೆ ಗೆ ಹಾಕಿಕೊಂಡ ನಂತರ ಅದನ್ನು ಬದಲಾಯಿಸ ಬೇಕು. ಇನ್ನು ಮಂಗಳವಾರ ಶುಕ್ರವಾರದ ದಿನಗಳಲ್ಲಿ ತಾಳಿಯನ್ನ ಯಾವುದೇ ಕಾರಣ ಕ್ಕೂ ಬದಲಾಯಿಸಬಾರದು. ಬೇರ್ಪಡಿಸಬಾರದು. ಬುಧವಾರ ಮತ್ತು ಗುರುವಾರದ ದಿನ ಮಾತ್ರ ಇದನ್ನು ಬದಲಾಯಿಸ ಲು ಸೂಕ್ತ ದಿನ ಅಂತ ಹೇಳ ಲಾಗುತ್ತದೆ. ಹಾಗೆ ಸಂಜೆ ಸಮಯ ದಲ್ಲಿ ಸಹ ಮಂಗಳ ಸೂತ್ರಬದಲಾಯಿಸಿ ಕೊಳ್ಳಬಾರದು.ಒಳ್ಳೆಯ ದಿನ ಮತ್ತು ಒಳ್ಳೆಯ ಮುಹೂರ್ತ ವನ್ನು ನೋಡಿಕೊಂಡು ಮಂಗಳಸೂತ್ರ ವನ್ನ ಬದಲಾಯಿಸುವುದಾಗಲಿ, ಬೇರೆ ಮಾಡಿಕೊಂಡು ಹೊಸದಾಗಿ ಹಾಕಿಕೊಳ್ಳುವುದಾಗಿ ಮಾಡಿಕೊಂಡರೆ ಒಳ್ಳೆಯದು.
ಸಕ್ಕರೆ ಕಾಯಿಲೆ ಇದ್ದವರು ದಯವಿಟ್ಟು ಈ ತಪ್ಪು ಯಾವುದೇ ಕಾರಣಕ್ಕೂ ಮಾಡಬೇಡಿ!
ಇನ್ನು ಮಂಗಳ ಸೂತ್ರ ವೂ ರಾತ್ರಿಯ ಸಮಯ ದಲ್ಲಿ ಹಾಕಿಕೊಂಡೇ ಮಲಗಬೇಕು. ಇತ್ತೀಚಿ ಗೆ ಕೆಲವು ಜನ ಅದನ್ನು ತೆಗೆದು ಇಟ್ಟು ಮಲಗುವುದರಿಂದ ಕಾಣುತ್ತೇವೆ. ಆದರೆ ದಾಳಿಯ ನ್ನ ಶರೀರ ದಿಂದ ಬೇರ್ಪಡಿಸಿ ಮಲಗ ಬಾರದು. ಮುಖ್ಯವಾಗಿ ಸುಮಂಗಲಿಯರು ಎಂತದ್ದೇ ಪರಿಸ್ಥಿತಿಯಲ್ಲಿ ಕೂಡ ಹೀಗೆ ಮಾಡ ಬಾರದು ಅಂತ ಹೇಳ್ತಾರೆ. ಯಾಕಂದ್ರೆ ಅದು ಘೋರ ಅಪಚಾರ ತಾಳಿಗೆ ಅವಮಾನ ಮಾಡಿದಂತೆ.ಅದರಿಂದ ಋಣಾತ್ಮಕ ಧನಾತ್ಮಕ ಶಕ್ತಿ ಗಳು ಕಳೆದು ಕೊಳ್ಳುತ್ತದೆ ಆ ಮಾಂಗಲ್ಯ ಎಂದು ಹೇಳುತ್ತಾರೆ ಹಿರಿಯರು. ಇನ್ನು ಪತಿಯ ಆಯುರಾರೋಗ್ಯ ಆಯಸ್ಸು ಬೆಳೆಯ ಬೇಕಾದರೆ ಮಾಂಗಲ್ಯ ಸುಮಂಗಲಿಯರಿಗೆ ಕುತ್ತಿಗೆಯ ಲ್ಲಿ ಸದಾ ಇರಲೇಬೇಕು. ಈ ಎಚ್ಚರಿಕೆಯ ನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು. ಹೀಗೆ ಮಾಡಿದಲ್ಲಿ ಪತಿಯ ಆರೋಗ್ಯ ವಲ್ಲದೆ ಆಯುಷ್ಯ ಬೆಳೆಯುತ್ತದೆ. ಸಂಸಾರ ವು ದಾಂಪತ್ಯವು ಅನ್ಯೋನ್ಯವಾಗಿ ಸಾಗಿ ಜೀವನ ಸುಗಮವಾಗಿ ಆನಂದಮಯ ವಾಗುತ್ತದೆ.Importance of Mangalsutra