Varthur Santhosh: ವರ್ತೂರ್ ಸಂತೋಷ್ ಅವರಿಗೆ ಸಿಕ್ತು ಬೇಲ್, ಬಿಗ್ ಬಾಸ್ ಮನೆಗೆ ಹೋಗ್ತಾರಾ ಸಂತೋಷ್?

Written by Pooja Siddaraj

Published on:

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 2 ವಾರಗಳ ಸಮಯ ಕಳೆದಿದೆ. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಅವರನ್ನು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಹೊರತಂದು, ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ಯಾವ ಭಾಷೆಯ ಯಾವುದೇ ಸೀಸನ್ ನಲ್ಲಿ ಕೂಡ ಈ ರೀತಿಯ ಘಟನೆ ನಡೆದಿರಲಿಲ್ಲ. ಈ ರೀತಿ ಅರ್ಧದಲ್ಲೇ ಹೊರಬಂದಿದ್ದು ಇದೇ ಮೊದಲು.

ವರ್ತೂರ್ ಸಂತೋಷ್ ಪಕ್ಕಾ ಹಳ್ಳಿಯ ರೈತ, ವ್ಯವಸಾಯ ಮಾಡಿ ಜೀವನ ಸಾಗುತ್ತಿರುವ ವ್ಯಕ್ತಿ ಮಾತ್ರ ಎಂದುಕೊಂಡಿದ್ದರೆ, ಆ ಊಹೆ ಖಂಡಿತ ತಪ್ಪು. ವರ್ತೂರ್ ಸಂತೋಷ್ ಬಹಳ ಶ್ರೀಮಂತ ವ್ಯಕ್ತಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇರಬೇಕು, ಹಳ್ಳಿಕಾರ್ ತಳಿ ಹಸುವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬಂದಿದ್ದ ವರ್ತೂರ್ ಸಂತೋಷ್ ಬಹಳ ದೊಡ್ಡ ಮನೆತನಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಎಂದರೆ ತಪ್ಪಲ್ಲ.

ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕೆ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ, ಆದರೆ ಅವರ ಕುಟುಂಬದವರು ಅದು ಹುಲಿ ಉಗುರು ಅಂತ ಸಂತೋಷ್ ಗೆ ಗೊತ್ತಿರಲಿಲ್ಲ, ಇದೆಲ್ಲಾ ಯಾರೋ ಬೇಕು ಅಂತ ಮಾಡಿರೋದು ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದರು. ಇದೀಗ ವರ್ತೂರ್ ಸಂತೋಷ್ ಅವರಿಗೆ ಜಾಮೀನು ನೀಡಿರುವ ವಿಚಾರ ಗೊತ್ತಾಗಿದೆ.

ಬೆಂಗಳೂರಿನ ಎಸಿಎಂಎಂ ಕೋರ್ಟ್ ಆದೇಶ ನೀಡಿದ್ದು, ವರ್ತೂರ್ ಸಂತೋಷ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಜಾಮೀನು ಸಿಕ್ಕಿದ ಬಳಿಕ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬರುತ್ತಾರೆ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದಾರೆ. ಅಷ್ಟೇ ಅಲ್ಲದೆ ವರ್ತೂರ್ ಸಂತೋಷ್ ಅವರನ್ನು ಕರೆದುಕೊಂಡು ಹೋಗಲು ಒಂದು ಪ್ರೈವೇಟ್ ವಾಹನ ಕೂಡ ಬಂದಿದ್ದು, ನೇರವಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಾರಾ ಎನ್ನುವುದು ಇನ್ನು ಗೊತ್ತಿಲ್ಲ..

ವರ್ತೂರ್ ಸಂತೋಷ್ ಅವರಿಗೆ ಈಗ ಜಾಮೀನು ಸಿಕ್ಕಿದ ಕಾರಣ ಹೊರಗಡೆ ಬಂದಿದ್ದಾರೆ. ಅಸಲಿಯಾಗಿ ಇವರಿಗೆ 14 ದಿನಗಳ ನ್ಯಾಯಾಂಗ ಬಂಧನ, ಅಂದರೆ ನವೆಂಬರ್ 6ರವರೆಗು ವರ್ತೂರ್ ಸಂತೋಷ್ ಅವರು ಜೈಲಿನಲ್ಲೇ ಇರಬೇಕಿತ್ತು. ಪ್ರಸ್ತುತ ಇವರು ಹೊರಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂದು ಕಾದು ನೋಡಬೇಕಿದೆ.

Leave a Comment