Horoscope: ಶಿವರಾತ್ರಿ ಹಬ್ಬಕ್ಕಿಂತ ಮೊದಲು ರೂಪುಗೊಳ್ಳುತ್ತಿದೆ ಕುಬೇರ ಯೋಗ! ಈ 5 ರಾಶಿಗಳಿಗೆ ಶುರುವಾಗಲಿದೆ ಚಿನ್ನದ ಸಮಯ
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಧೈರ್ಯ, ಸಾಹಸ, ಸಂಪತ್ತು ಇವುಗಳ ಕಾರಕ ಎಂದು ಕರೆಯುತ್ತಾರೆ. ಶುಕ್ರನಿಗೆ ವಿಶೇಷ ಸ್ಥಾನ ಸಹ ಇದೆ. ಶಿವರಾತ್ರಿ ಹಬ್ಬದ ಹಿಂದಿನ ದಿನ ಶುಕ್ರನು ಮಾರ್ಚ್ 7ರಂದು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಕೆಲವು ರಾಶಿಗಳಿಗೆ ವಿಶೇಷವಾದ ಧನಲಾಭ ಉಂಟಾಗಲಿದ್ದು, ಅವರಿಗೆ ಈಗ ಚಿನ್ನದ ಸಮಯ ಶುರುವಾಗುತ್ತದೆ ಎಂದರೆ ತಪ್ಪಲ್ಲ. ಇದೀಗ ಈ ರಾಶಿಗಳ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
ಧನು ರಾಶಿ :- ಇದು ಅದೃಷ್ಟ ನಿಮಗೆ ಸಂಪೂರ್ಣ ಬೆಂಬಲ ಕೊಡುವ ಸಮಯ ಎಂದರೆ ತಪ್ಪಲ್ಲ. ನೀವು ಊಹಿಸಿದ ಕಡೆಯಿಂದ ಹಣ ಬರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಈ ವೇಳೆ ನೆಲ ಖರೀದಿ ಮಾಡುವ ಯೋಗವಿದೆ. ಹೊಸ ವೆಹಿಕಲ್ ಖರೀದಿ ಮಾಡಬಹುದು. ಕುಟುಂಬದಲ್ಲಿ ಖುಷಿ ಇರುತ್ತದೆ.
ಮೀನ ರಾಶಿ :- ಮೊದಲೇ ಮಾಡಿರುವ ಹೂಡಿಕೆ ನಿಮಗೆ ಲಾಭ ತಂದುಕೊಡುತ್ತದೆ. ಹೊರಗೆ ಸಿಕ್ಕಿಕೊಂಡಿದ್ದ ಹಣ ವಾಪಸ್ ಬರುತ್ತದೆ. ಪರ್ಸನಲ್ ಮತ್ತು ಪ್ರೊಫೆಷನಲ್ ಎರಡು ವಿಷಯಗಳಲ್ಲಿ ಖುಷಿ ನಿಮ್ಮ ಜೊತೆಗಿರುತ್ತದೆ.
ತುಲಾ ರಾಶಿ :- ಈ ವೇಳೆ ನಿಮ್ಮ ಆದಾಯ ಜಾಸ್ತಿ ಆಗುತ್ತದೆ, ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಈ ವೇಳೆ ನೀವು ಕಾರ್ ಖರೀದಿ ಮಾಡಬಹುದು. ಮಕ್ಕಳಿಂದ ಸಂತೋಷ ಪಡುತ್ತೀರಿ, ಹಳೆಯ ಹೂಡಿಕೆಗಳು ಲಾಭ ತರುತ್ತದೆ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ.
ಮಿಥುನ ರಾಶಿ :- ಈ ವೇಳೆ ನಿಮ್ಮ ಕೆಲಸಕ್ಕೆ ಒಳ್ಳೆಯ ರಿಸಲ್ಟ್ಸ್ ಸಿಗುತ್ತದೆ. ಹೊರದೇಶಕ್ಕೆ ಹೋಗುವ ಹಾಗೆ ಆಗಬಹುದು, ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭ ಪಡೆಯಬಹುದು. ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಜೊತೆಗಿರುತ್ತದೆ..
ಮೇಷ ರಾಶಿ :- ಈ ವೇಳೆ ನಿಮಗೆ ಕಷ್ಟಕ್ಕೆ ತಕ್ಕ ಫಲ ಸಿಗುತ್ತದೆ. ಎಲ್ಲಾ ವಿಚಾರದಲ್ಲೂ ಯಶಸ್ಸು ನಿಮ್ಮದೇ ಆಗಿರುತ್ತದೆ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಕಾರ್ ಅಥವಾ ಆಸ್ತಿ ಖರೀದಿ ಮಾಡುವ ಸಮಯ ಇದು, ಉದ್ಯೋಗದಲ್ಲಿ ನಿಮ್ಮ ಸಂಬಳ ಜಾಸ್ತಿಯಾಗುತ್ತದೆ.