Astrology: ಎಷ್ಟೇ ಪ್ರಯತ್ನಪಟ್ಟರು ಸಾಲ ಜಾಸ್ತಿ ಆಗ್ತಾನೆ ಇದ್ಯಾ? ಹಾಗಿದ್ರೆ ಈ ರೀತಿ ಮಾಡಿ

0 30

Astrology: ಬದುಕಿನಲ್ಲಿ ಎಲ್ಲಾ ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ನಾವು ಊಹಿಸಲಾಗದ ಪರಿಸ್ಥಿತಿ ಎದುರಾಗಿ ಹಣದ ಅವಶ್ಯಕತೆ ಜಾಸ್ತಿಯಾಗುತ್ತದೆ. ನಮ್ಮ ಬಳಿ ಹಣ ಇಲ್ಲದೇ ಇದ್ದಾಗ ಅದಕ್ಕಾಗಿ ಸಾಲ ಮಾಡುತ್ತೇವೆ. ಆದರೆ ಈ ಸಾಲ ಎನ್ನುವುದು ಒಂದು ಬಲೆ ಇದ್ದ ಹಾಗೆ, ಇದರಲ್ಲಿ ಒಮ್ಮೆ ಸಿಕ್ಕಿಹಾಕಿಕೊಂಡರೆ ಹೊರಗೆ ಬರೋದು ತುಂಬಾ ಕಷ್ಟ. ಹಾಗಾಗಿ ಆದಷ್ಟು ಸಾಲ ಮಾಡದೆಯೇ ಇರಬೇಕು. ಒಂದು ವೇಳೆ ನೀವು ಸಾಲದ ಸಿಲುಕಿಕೊಂಡಿದ್ದೀರಾ? ಹಾಗಿದ್ರೆ ಈ ರೀತಿ ಮಾಡಿ, ಆಗ ನಿಮ್ಮ ಸಾಲವೆಲ್ಲಾ ಕಡಿಮೆ ಆಗುತ್ತದೆ..

ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ಬದುಕಿನ ಎಲ್ಲಾ ಸಮಸ್ಯೆಗಳಿಗು ಪರಿಹಾರ ಸಿಗುತ್ತದೆ. ಅದೇ ರೀತಿ ಸಾಲ ಬಾಧೆ ಸಮಸ್ಯೆಗು ಪರಿಹಾರ ಇದ್ದು, ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ.. ಸಾಲದ ಸಮಸ್ಯೆ ಕಡಿಮೆ ಮಾಡಲು ಬೇರೇನೂ ಬೇಡ ಮರದ ಸಹಾಯ ಪಡೆಯಬೇಕು. ತುಳಸಿ, ಬಿನ್ನಿ, ಬಿಲ್ವಪತ್ರೆ ಮರ ಮನುಷ್ಯನ ಸಾಲದ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ. ಆದರೆ ಸಾಲದಿಂದ ಹೊರಬರಲು ಮತ್ತೊಂದು ಮರ ಕೂಡ ಸಹಾಯ ಮಾಡುತ್ತದೆ, ಅದು ಅರ್ಜುನ ಮರ ತೊಗಟೆ ಆಗಿದೆ. ಇದನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.

ಅರ್ಜುನ ಮರದ ತೊಗಟೆಯ ಸಣ್ಣ ಭಾಗವನ್ನು ನಿಮ್ಮ ಮನೆಗೆ ತನ್ನಿ. ಅದನ್ನು ಶುದ್ಧೀಕರಿಸಿ, ನಿಮ್ಮ ದೇವರ ಮನೆಯಲ್ಲಿ ಒಂದು ಕೆಂಪು ಬಟ್ಟೆಯನ್ನು ತಂದು, ಅದರಲ್ಲಿ ಅರ್ಜುನ ಮರದ ತೊಗಟೆಯನ್ನು ಇಟ್ಟು, ದೇವರ ಮನೆಯಲ್ಲಿ ಇರಿಸಿ ಲಕ್ಷ್ಮೀದೇವಿಗೆ ಅರ್ಪಿಸಿ. ಬಳಿಕ ಪೂಜೆ ಮಾಡಿ, ಬಟ್ಟೆಯ ಜೊತೆಯಲ್ಲೇ ಹರಿಯುವ ನದಿಗೆ ಇದನ್ನು ತೇಲಲು ಬಿಟ್ಟುಬಿಡಿ. ಈ ಪರಿಹಾರವನ್ನು ಸರಿಯಾಗಿ ಮಾಡಿದರೆ, ಸಾಲದ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ..

ಮತ್ತೊಂದು ಪರಿಹಾರ ಏನು ಎಂದರೆ, ಅರ್ಜುನ ಮರದ ತೊಗಟೆಯ ಮೇಲೆ ಕೆಂಪು ಚಂದನ ಬಳಸಿ ಸಿಂಪಡಿಸಿ..ನಂತರ ತೊಗಟೆಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ಮನೆಯಲ್ಲಿ ಹಣ ಇಡುವ ಬೀರುವಿನಲ್ಲಿ, ಲಾಕರ್ ಒಳಗೆ ಇಡಿ. ಸಾಲಬಾಧೆ ಸಮಸ್ಯೆಯಿಂದ ಹೊರ ಬರುವುದಕ್ಕೆ ಇದು ಮತ್ತೊಂದು ಪರಿಹಾರ ಆಗಿದೆ.

Leave A Reply

Your email address will not be published.