Horoscope: ಶನಿದೇವರ ದೋಷದಿಂದ ಪರಿಹಾರ ಪಡೆಯಲು ಈ 5 ವಿಧಾನಗಳನ್ನು ಟ್ರೈ ಮಾಡಿ!
Horoscope: ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿದೇವರ ಸ್ಥಾನ ಉತ್ತಮವಾಗಿದ್ದರೆ ಆತನಿಗೆ ಬದುಕಿನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಶನಿದೇವರ ವಕ್ರದೃಷ್ಟಿ ಶುರುವಾದರೆ, ದೋಷ ಶುರುವಾದರೆ, ಬದುಕಿನಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ಶನಿದೇವರ ಕೆಟ್ಟ ಪರಿಣಾಮ ಒಳ್ಳೆಯದಲ್ಲ. ಹಾಗಾಗಿ ಶನಿದೇವರ ದೋಷದಿಂದ ಪರಿಹಾರ ಪಡೆಯಲು ಈ 5 ಸರಳ ಸಲಹೆಗಳನ್ನು ಅನುಸರಿಸಿ..
ಕಷ್ಟಪಟ್ಟು ಕೆಲಸ ಮಾಡಿ: ಕೆಲಸ ಎಂಥದ್ದೇ ಇರಲಿ, ಎಷ್ಟೇ ಕಷ್ಟ ಇರಲಿ ಅಡ್ಡದಾರಿಗೆ ಹೋಗದೆ ಶ್ರಮವಹಿಸಿ ಕೆಲಸ ಮಾಡಿ. ಇದರಿಂದ ಶನಿದೇವರ ಆಶೀರ್ವಾದ ಸಿಗುತ್ತದೆ, ಅಡ್ಡದಾರಿಗಳು ಶನಿದೇವರಿಗೆ ಹಿಡಿಸುವುದಿಲ್ಲ. ಹಾಗಾಗಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ಶನಿದೇವರ ಆಶೀರ್ವಾದ ಸಿಗುತ್ತದೆ ಹಾಗೆಯೇ ಶನಿದೋಷದ ಪ್ರಭಾವ ಸಹ ಕಡಿಮೆ ಆಗುತ್ತದೆ..
ಆಂಜನೇಯ ಸ್ವಾಮಿಗೆ ಪೂಜೆ ಮಾಡಿ: ನಿಮ್ಮ ಜಾತಕದಲ್ಲಿ ಶನಿದೇವರ ದೋಷವಿದ್ದರೆ, ಆಂಜನೇಯ ಸ್ವಾಮಿಯನ್ನು ಪೂಜಿಸಿ, ಆರಾಧಿಸಿ. ಇದರಿಂದ ನಿಮಗೆ ಒಳ್ಳೆಯದಾಗುತ್ತದೆ, ಶನಿದೋಷದ ಪ್ರಭಾವ ಕಡಿಮೆ ಆಗುತ್ತದೆ..
ಅಹಂಕಾರ ಬೇಡ: ಇನ್ನೊಬ್ಬರ ಮೇಲೆ ದ್ವೇಷ ಇಟ್ಟುಕೊಳ್ಳುವುದು, ಸೇಡಿನ ಮನೋಭಾವ ಬೆಳೆಸಿಕೊಳ್ಳುವುದು. ಅಹಂಕಾರ ತೋರುವುದು ಒಳ್ಳೆಯ ಗುಣಗಳಲ್ಲ, ಇದನ್ನೆಲ್ಲಾ ಬಿಟ್ಟರೆ ಶನಿದೇವರ ಆಶೀರ್ವಾದ ಸಿಗುತ್ತದೆ.
ಕಪ್ಪು ವಸ್ತು ದಾನ: ಕಷ್ಟದಲ್ಲಿ ಇರುವವರಿಗೆ ದಾನ ಕೊಡುವುದು ಒಳ್ಳೆಯದು. ಅದರಲ್ಲೂ ಕಪ್ಪು ವಸ್ತುಗಳನ್ನು ದಾನ ನೀಡಿದರೆ ಶನಿದೇವರಿಗೆ ತುಂಬಾ ಸಂತೋಷವಾಗುತ್ತದೆ.
ಕಪ್ಪು ನಾಯಿಗೆ ಆಹಾರ ನೀಡಿ: ಕಪ್ಪು ನಾಯಿಗಳಿಗೆ ಆಹಾರ ಕೊಡಿ, ಇದರಿಂದಲು ಶನಿದೋಷದ ಪ್ರಭಾವ ಕಡಿಮೆ ಆಗುವ ಸಾಧ್ಯತೆ ಇದೆ. ಈ ಸಲಹೆಗಳನ್ನು ಅನುಸರಿಸಿ.