Bigg Boss: ಮತ್ತೊಮ್ಮೆ ವೀಕ್ಷಕರ ನಿರೀಕ್ಷೆ ಸುಳ್ಳು ಮಾಡಿದ್ರಾ ಕಿಚ್ಚ ಸುದೀಪ್? ನಿನ್ನೆಯ ಕಿಚ್ಚನ ಪಂಚಾಯಿತಿ ಹೇಗಿತ್ತು?
Bigg Boss: ನಿನ್ನೆಯ ಬಿಗ್ ಬಾಸ್ ವೀಕೆಂಡ್ ಪಂಚಾಯ್ತಿ ಸಂಚಿಕೆಯ ಬಗ್ಗೆ ವೀಕ್ಷಕರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಮೆರೆದ ಕ್ರೂರತೆ ಒಪ್ಪುವಂಥದ್ದಲ್ಲ, ಕಿಚ್ಚ ಸುದೀಪ್ ಅವರು ವಿನಯ್ ಅಂಡ್ ಗ್ಯಾಂಗ್ ಮಾಡಿದ ಕ್ರೂರತೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಎಲ್ಲರೂ ಬಯಸಿದ್ದರು. ಆದರೆ ನಿನ್ನೆಯ ಸಂಚಿಕೆಯಲ್ಲಿ ಆಗಿದ್ದೇನು? ಸುದೀಪ್ ಅವರು ಈ ನಿರೀಕ್ಷೆಯನ್ನು ಸುಳ್ಳು ಮಾಡಿಬಿಟ್ರ?
ನಿನ್ನೆಯ ಕಿಚ್ಚ ಸುದೀಪ್ ಅವರ ಕಿಚ್ಚನ ಪಂಚಾಯ್ತಿ ಎಪಿಸೋಡ್ ನೋಡಲು ಕರ್ನಾಟಕದ ಎಲ್ಲಾ ಜನರು ಕಾದು ಕುಳಿತಿದ್ದರು ಎಂದರು ತಪ್ಪಲ್ಲ. ಆದರೆ ನಿನ್ನೆಯ ಸಂಚಿಕೆಯಲ್ಲಿ ನಡೆದಿದ್ದೆ ಬೇರೆ. ಒಬ್ಬೊಬ್ಬ ಸ್ಪರ್ಧಿಯನ್ನು ಕೂರಿಸಿ ಅವರಿಗೆ ಅನ್ನಿಸಿದ್ದನ್ನು ಹೇಳಿ ಎಂದು ಹೇಳುವ ಮೂಲಕ ಎಪಿಸೋಡ್ ಶುರು ಮಾಡಿದರು ಕಿಚ್ಚ ಸುದೀಪ್. ಬಹುತೇಕ ಎಲ್ಲಾ ಸ್ಪರ್ಧಿಗಳು ಸಮರ್ಥನೆ ಮಾಡಿಕೊಂಡರು. ಬಳಿಕ ಮಾತು ಶುರು ಮಾಡಿದ ಸುದೀಪ್ ಅವರು ಮನೆಯಲ್ಲಿ ನಡೆದ ಘಟನೆಗಳಿಗೆ ಕಾರಣ ಆಗಿದ್ದು ಏನೇನು ಎಂದು ವಿವರಿಸುತ್ತಾ ಹೋದರು.
ಒಂದೊಂದೇ ಕಾರಣ ವಿವರಿಸುವಾಗ ಸ್ನೇಹಿತ್ ಅವರಿಗೆ ತಕ್ಕ ಪಾಠ ಕಲಿಸಲಾಯಿತು. ಆದರೆ ಅಂಥ ಘೋರ ನಡೆದು ಸಂಗೀತ ಮತ್ತು ಪ್ರತಾಪ್ ಇಬ್ಬರಿಗೂ ಕಣ್ಣು ಡ್ಯಾಮೇಜ್ ಆಗುವ ಮಟ್ಟಕ್ಕೆ ತೊಂದರೆ ಆಗಿದೆ, ಇಬ್ಬರಿಗೂ ದೃಷ್ಟಿ ತೊಂದರೆ ಆಗಿದ್ದರು ಸಹ ಸುದೀಪ್ ಅವರು ತಪ್ಪು ಸಂಗೀತ ತಂಡದ್ದೇ, ಶುರು ಮಾಡಿದ್ದೇ ಆ ತಂಡದವರು ಎನ್ನುವ ಥರ ಮಾತನಾಡಿ, ವಿನಯ್ ಅಂಡ್ ಗ್ಯಾಂಗ್ ಅವರದ್ದು ತಪ್ಪಿಲ್ಲ ಎನ್ನುವ ರೀತಿ ಹಾಗೂ ಬಿಗ್ ಬಾಸ್ ಟೀಮ್ ನದ್ದು ಏನು ತಪ್ಪಿಲ್ಲ ಎನ್ನುವ ಹಾಗೆ ಸಮರ್ಥನೆ ಮಾಡಿಕೊಂಡ ಹಾಗೆ ಅನ್ನಿಸಿತ್ತು ನಿನ್ನೆಯ ಸಂಚಿಕೆ ಎನ್ನುವುದು ಜನರ ಅಭಿಪ್ರಾಯ ಆಗಿದೆ.
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವರ್ತೂರ್ ಸಂತೋಷ್ ಮತ್ತು ವಿನಯ್ ಮೋಸ ಮಾಡಿ ಗೆದ್ದಿದ್ದಕ್ಕೆ ಕ್ಯಾಪ್ಟನ್ಸಿ ಕೋಣೆಗೆ ಬೀಗ ಹಾಕಿಸಿ, ಇನ್ನುಮುಂದೆ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಇರುವುದಿಲ್ಲ ಎಂದು ಹೇಳಿದರು. ಕಿಚ್ಚನ ಈ ನಡೆ ಜನರಿಗೆ ಇಷ್ಟವಾಯಿತಾದರು, ಬೇರೆ ವಿಚಾರದಲ್ಲಿ ಸುದೀಪ್ ಅವರು ವಿನಯ್ ನಮ್ರತಾ ಪರವಾಗಿಯೇ ಇದ್ದಾರೆ, ಸಂಗೀತ ಪ್ರತಾಪ್ ಅವರಿಗೆ ನ್ಯಾಯ ಕೊಡಿಸಲಿಲ್ಲ ಎನ್ನುವುದು ಜನರ ಅಭಿಪ್ರಾಯ ಆಗಿದೆ.
ಅಷ್ಟೆಲ್ಲಾ ತೊಂದರೆ ಸಂಭವಿಸಿದ್ದರು ಸಹ, ಮನೆಯಲ್ಲಿರುವ ಆಪೋಸಿಟ್ ಟೀಮ್ ವ್ಯಕ್ತಿಗಲಲ್ಲಿ ಕಿಂಚಿತ್ತು ಅಪರಾಧಿ ಭಾವನೆ ಕಾಡಲಿಲ್ಲ, ತಾವು ಏನು ಮಾಡಲೇ ಇಲ್ಲ, ಅವರು ಮಾಡಿದ್ದಕ್ಕೆ ನಾವು ಮಾಡಿದ್ದು ಎನ್ನುವ ರೀತಿಯಲ್ಲೇ ಎಲ್ಲರೂ ಇದ್ದರು. ಇನ್ನು ಸುದೀಪ್ ಅವರು ಕೂಡ ಸಂಗೀತ ಪ್ರತಾಪ್ ಅವರಿಗೆ ಆಗಿದ್ದು ತಪ್ಪು ಎಂದು ತಪ್ಪು ಮಾಡಿರುವವರಿಗೆ ಅರ್ಥ ಮಾಡಿಸುವ ಪ್ರಯತ್ನವನ್ನು ಮಾಡಲಿಲ್ಲ ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ ಆಗಿದೆ. ನಿಮ್ಮ ಅನಿಸಿಕೆಯನ್ನು ಕಮೆಂಟ್ಸ್ ಮೂಲಕ ತಿಳಿಸಿ..