Pavan Kalyan: ಮೂರನೇ ಪತ್ನಿಗೂ ವಿಚ್ಛೇದನ ಕೊಡ್ತಾರಂತೆ ಪವನ್ ಕಲ್ಯಾಣ್! ವೇಣುಸ್ವಾಮಿ ಅವರಿಂದ ಶಾಕಿಂಗ್ ಭವಿಷ್ಯ!

0 20

Pavan Kalyan: ವೇಣು ಸ್ವಾಮಿ, ಇವರು ಟಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ನುಡಿಯುವ ಮೂಲಕವೇ ಹೆಚ್ಚು ಫೇಮಸ್ ಆಗಿದ್ದಾರೆ. ಇವರು ನುಡಿದಿರುವ ಭವಿಷ್ಯಗಳಲ್ಲ ಬಹುತೇಕ ನಿಜವಾಗಿದೆ ಎನ್ನುವ ಕಾರಣಕ್ಕೆ ಬಹಳಷ್ಟು ಜನರು ಇವರ ಮಾತನ್ನು ನಂಬುತ್ತಾರೆ. ಟಾಲಿವುಡ್ ನ ಹಲವು ಸೆಲೆಬ್ರಿಟಿಗಳು ಕೂಡ ಇವರ ಮಾತನ್ನು ಕೇಳಿ, ಇವರು ಹೇಳಿದ ಪೂಜೆಗಳನ್ನು ಮಾಡಿಸಿ, ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದಾರೆ ಎಂದು ಹೇಳಲಾಗುತ್ತದೆ..

ಇದೀಗ ಈ ಗುರೂಜಿ ನಟ ಪವನ್ ಕಲ್ಯಾಣ್ ಅವರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ನಟ ಪವನ್ ಕಲ್ಯಾಣ್ ಅವರು ತೆಲುಗಿನಲ್ಲಿ ಸ್ಟಾರ್ ಹೀರೋ ಆಗಿ ಹೆಸರು ಮಾಡಿದ್ದಾರೆ, ಜೊತೆಗೆ ಇವರು ರಾಜಕೀಯದಲ್ಲಿ ಕೂಡ ಹೆಸರು ಮಾಡಿದ್ದಾರೆ. ಪ್ರಸ್ತುತ ಸಿನಿಮಾಗಳನ್ನು ಕಡಿಮೆ ಮಾಡಿ, ರಾಜಕೀಯದ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ ಪವನ್ ಕಲ್ಯಾಣ್. ಹಾಗೆಯೇ ಇವರು ವಿವಾದಾತ್ಮಕ ದಾಂಪತ್ಯ ಜೀವನದ ವಿಚಾರಕ್ಕೂ ಸುದ್ದಿಯಾಗುತ್ತಾರೆ.

ಪವನ್ ಕಲ್ಯಾಣ್ ಅವರು ಈಗಾಗಲೇ ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿ, ರಷ್ಯಾ ಮೂಲದ ಅನ್ನಾ ಲೆಜ್ನೆವಾ ಎನ್ನುವವರ ಜೊತೆಗೆ ಮದುವೆಯಾಗಿದ್ದಾರೆ. ಇದೇ ಕಾರಣಕ್ಕೆ ಇವರನ್ನು ರಾಜಕೀಯದಲ್ಲಿ ಕೆಳಗೆ ಹಾಕುವ ಪ್ರಯತ್ನಗಳು ಕೂಡ ನಡೆದಿದೆ. ಆದರೆ ಪವನ್ ಕಲ್ಯಾಣ್ ಅವರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ರಾಜಕೀಯ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಆದರೆ ಇದೀಗ ಇವರ ದಾಂಪತ್ಯ ಜೀವನದ ಬಗ್ಗೆ ವೇಣು ಸ್ವಾಮಿ ಅವರು ಭವಿಷ್ಯ ನುಡಿದಿದ್ದು, ಶೀಘ್ರದಲ್ಲೇ ಪವನ್ ಕಲ್ಯಾಣ್ ಅವರು ಮೂರನೇ ಪತ್ನಿಗೂ ವಿಚ್ಛೇದನ ಕೊಡುತ್ತಾರೆ ಎಂದು ಹೇಳಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯ ಇದೆ, ಅದನ್ನು ಬಿಟ್ಟು ರಾಜಕೀಯಕ್ಕೆ ಹೋಗಿದ್ದಾರೆ. ಈಗ ಅವರು ಮುಖ್ಯಮಂತ್ರಿ ಆಗೋದು ಹೇಗೆ ಎಂದು ಯೋಚನೆ ಮಾಡಬೇಕು, ಪವನ್ ಅವರು ಹೆಚ್ಚಾಗಿ ತ್ರಿವಿಕ್ರಂ ಅವರ ಮಾತುಗಳನ್ನ ಕೇಳುತ್ತಾರೆ..

ಆದರೆ ತ್ರಿವಿಕ್ರಂ ಅವರು ಪವನ್ ಅವರ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಸಲಹೆಯನ್ನು ನೀಡುವುದಿಲ್ಲ. ಪವನ್ ಅವರು ಮುಖ್ಯಮಂತ್ರಿ ಆಗಬೇಕು, ನಾನು ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತೇನೆ.. ಎಂದು ಹೇಳಿದ್ದಾರೆ ವೇಣು ಸ್ವಾಮಿ. ಈ ಮಾತುಗಳು ಈಗ ವೈರಲ್ ಆಗಿವೆ.

Leave A Reply

Your email address will not be published.