Prabhas: ಅಯೋಧ್ಯೆಯ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ಕೊಟ್ಟಿದ್ದಾರಾ ನಟ ಪ್ರಭಾಸ್? ಅಸಲಿ ಸುದ್ದಿ ಇಲ್ಲಿದೆ
Prabhas: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಹುಬಲಿ ಸಿನಿಮಾ ನಟ ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ನಟನ ಬಗ್ಗೆ ಇದೀಗ ಒಂದು ವಿಚಾರ ಕೇಳಿ ಬರುತ್ತಿದೆ. ಅದೇನೆಂದರೆ ಪ್ರಭಾಸ್ ಅವರು ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಗೆ 50 ಕೋಟಿ ದೇಣಿಗೆ ನೀಡಿದ್ದಾರೆ ಎನ್ನುವುದಾಗಿದೆ..
ನಟ ಪ್ರಭಾಸ್ ಅವರು ಈಗ ಅವರ ಸಿನಿಮಾ ಗೆದ್ದಿರುವ ಸಂತೋಷದಲ್ಲಿದ್ದಾರೆ. ಪ್ರಭಾಸ್ ಅವರು ನಟಿಸಿ, ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿರುವ ಸಲಾರ್ ಭಾಗ1 ಡಿಸೆಂಬರ್ 22 ರಂದು ಬಿಡುಗಡೆಯಾಗಿ 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಭಾರಿ ಸೆನ್ಸೇಷನ್ ಸೃಷ್ಟಿಸಿದೆ. ಈ ಸಿನಿಮಾ ಪ್ರಭಾಸ್ ಅವರಿಗೆ ದೊಡ್ಡ ಕಂಬ್ಯಾಕ್ ಎಂದು ಹೇಳಿದರೆ ತಪ್ಪಲ್ಲ. ಇದರ ಜೊತೆಗೆ ಪ್ರಭಾಸ್ ಅವರು ತಮ್ಮ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ..
ಹೀಗಿರುವಾಗ ಪ್ರಭಾಸ್ ಅವರು ಅಯೋಧ್ಯೆಯ ರಾಮಮಂದಿರಕ್ಕೆ 50 ಕೋಟಿ ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಆಗುತ್ತಿದೆ, ಇಡೀ ದೇಶವೇ ಕಾದು ಕುಳಿತಿದೆ ಈ ದಿನಕ್ಕಾಗಿ. ಬಹಳಷ್ಟು ಕಲಾವಿದರಿಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಈ ವೇಳೆ ಪ್ರಭಾಸ್ ಅವರು ದೇಣಿಗೆ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಆದರೆ ಪ್ರಭಾಸ್ ಅವರ ಟೀಮ್ ಕಡೆಯಿಂದ ಅಧಿಕೃತವಾಗಿ ಮಾಹಿತಿ ಸಿಕ್ಕಿದ್ದು ಇದು ಗಾಳಿ ಸುದ್ದಿ ಅಷ್ಟೇ ಎಂದು ಹೇಳಿದ್ದಾರೆ. ಪ್ರಭಾಸ್ ಅವರು 50 ಕೋಟಿ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟನೆ ಪಡಿಸಿದ್ದು, ಜೊತೆಗೆ ಶ್ರೀರಾಮಮಂದಿರ ಉದ್ಘಾಟನೆಗೆ ಪ್ರಭಾಸ್ ಅವರಿಗೆ ಆಹ್ವಾನ ಬಂದಿದ್ಯೋ ಇಲ್ಲವೋ ಅದು ಕೂಡ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.