Sapthami Gowda: ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ! ಯಾವ ಧಾರವಾಹಿ ಮೂಲಕ ಗೊತ್ತಾ?

0 36

Sapthami Gowda: ಕಾಂತಾರ ಸಿನಿಮಾ ತೆರೆಕಂಡ ನಂತರ ಭಾರಿ ಬೇಡಿಕೆ ಸೃಷ್ಟಿಯಾಗಿರುವುದು ರಿಷಬ್ ಶೆಟ್ಟಿ ಅವರಿಗೆ ಮಾತ್ರವಲ್ಲ, ಸಪ್ತಮಿ ಗೌಡ ಅವರಿಗು ಕೂಡ. ಕಾಂತಾರ ಗಿಂತ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು ಸಹ ಸಪ್ತಮಿ ಗೌಡ ಅವರಿಗೆ ಬಿಗ್ ಬ್ರೇಕ್ ನೀಡಿದ್ದು ಕಾಂತಾರ. ಮುದ್ದಾದ ಮಾಯಾಂಗಿ ಎಂದು ಎಲ್ಲಾ ಸಿನಿಪ್ರಿಯರು ಇವರನ್ನು ಹಾಡಿ ಹೊಗಳಿದರು.

ಕಾಂತಾರ ಸಿನಿಮಾ ಯಾವ ಹಂತಕ್ಕೆ ಇವರಿಗೆ ಹೆಸರು ತಂದುಕೊಟ್ಟಿತು ಎಂದರೆ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಕೂಡ ಹೆಸರುವಾಸಿ ಆದರು ಸಪ್ತಮಿ ಗೌಡ. ಈಗಾಗಲೇ ಹಿಂದಿಯ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿಸಿರುವ ಸಪ್ತಮಿ ಗೌಡ, ಕನ್ನಡದಲ್ಲೇ ಬಹಳ ಬ್ಯುಸಿ ಇದ್ದಾರೆ. ಅಭಿಷೇಕ್ ಅಂಬರೀಷ್ ಅವರೊಡನೆ ಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ..

ಇನ್ನು ದೊಡ್ಮನೆಯ ಕುಡಿ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವ ಸಿನಿಮಾಗು ಸಪ್ತಮಿ ಅವರೇ ನಾಯಕಿ. ಎಲ್ಲೆಲ್ಲಿಯೂ ಸಪ್ತಮಿ ಅವರಿಗೆ ಬೇಡಿಕೆ ಇದೆ. ಇದರ ಜೊತೆಗೆ ಈಗ ಸಪ್ತಮಿ ಗೌಡ ಅವರು ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ. ಪ್ರಸ್ತುತ ಶ್ರೀರಸ್ತು ಶುಭಮಸ್ತು ಧಾರವಾಹಿ ರೋಚಕ ಘಟ್ಟ ತಲುಪಿದೆ.

ಮಾಧವನ ಎರಡನೇ ಮಗ ಅಭಿ ಮದುವೆ ಶಾಸ್ತ್ರಗಳು ಶುರುವಾಗಿದೆ. ಮದುವೆ ನಡೆಯುವುದಕ್ಕೆ ಕಾರಣ ಆಗಿರುವುದೇ ತುಳಸಿ, ಆದರೆ ತುಳಸಿಗೆ ಈಗ ಮತ್ತೊಂದು ಸಂಕಟ ಶುರುವಾಗಿದೆ. ಹುಡುಗಿಯ ತಂದೆ ಜನಾರ್ಧನ, ಈ ಮದುವೆ ನಡೆಯಬೇಕು ಎಂದರೆ ತುಳಸಿ ಮನೆಬಿಟ್ಟು ಹೋಗಬೇಕು ಎಂದು ಷರತ್ತು ಹಾಕಿದ್ದಾನೆ. ಈ ಮಾತಿಗೆ ಒಪ್ಪಿಕೊಂಡ ತುಳಸಿ, ಮನೆಯಿಂದ ಹೊರನಡೆಯಲು ಸಿದ್ಧರಾಗಿರುವ ಹಾಗೆ ಪ್ರೋಮೋ ತೋರಿಸಲಾಗಿದೆ.

ಧಾರಾವಾಹಿಯ ಈ ಹೊಸ ತಿರುವನ್ನು ಹೇಳುವುದಕ್ಕೆ ಸಪ್ತಮಿ ಗೌಡ ಬಂದಿದ್ದಾರೆ. ಸಪ್ತಮಿ ಗೌಡ ಅವರನ್ನು ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನೋಡಿ ನೆಟ್ಟಿಗರು ಸಂತೋಷಪಟ್ಟಿದ್ದು, ತುಳಸಿ ಅವರು ನಿಜಕ್ಕೂ ಮನೆ ಬಿಟ್ಟು ಹೋಗುತ್ತಾರಾ? ಮಾಧವ ಮತ್ತೆ ಒಂಟಿಯಾಗುತ್ತಾರಾ? ಎಂದು ವೀಕ್ಷಕರಲ್ಲಿ ಪ್ರಶ್ನೆಗಳು ಶುರುವಾಗಿದೆ..

Leave A Reply

Your email address will not be published.