Amruthadhare: ಅಮೃತಧಾರೆ ಧಾರವಾಹಿ ಅಭಿಮಾನಿಗಳಿಗೆ ಸಿಹಿ ಸುದ್ದಿ! ಏನಾಗಿದೆ ಗೊತ್ತಾ?
Amruthadhare: ಕಿರುತೆರೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ಧಾರವಾಹಿಗಳಲ್ಲಿ ಒಂದು ಅಮೃತಧಾರೆ. ಈ ಧಾರವಾಹಿಯಲ್ಲಿ ನಟ ರಾಜೇಶ ನಟರಂಗ ನಾಯಕ ಗೌತಮ್ ಪಾತ್ರದಲ್ಲಿ ನಟಿ ಛಾಯಾ ಸಿಂಗ್ ನಾಯಕಿ ಭೂಮಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರಿಗೆ ಧಾರವಾಹಿಯಲ್ಲಿ ಬಹಳ ಲೇಟ್ ಆಗಿ ಮದುವೆ ಆಗುತ್ತದೆ. ಇಬ್ಬರಿಗೂ ನಾನಾ ಕಾರಣಕ್ಕೆ ಮದುವೆ ಆಗಿರುವುದಿಲ್ಲ. ವಿಧಿ ಎನ್ನುವ ಹಾಗೆ ಇಬ್ಬರ ಬಂಧ ಬೆಸೆಯುತ್ತದೆ.
ಈ ರೀತಿ ಗೌತಮ್ ಭೂಮಿಕಾ ಮದುವೆ ಆಗಿದೆ. ಮದುವೆಗಿಂತ ಮೊದಲು, ಮದುವೆಯಾದ ನಂತರ ಇವರಿಬ್ಬರ ಸಣ್ಣ ತಮಾಷೆಯ ಜಗಳಗಳು, ಸ್ನೇಹ ಇದೆಲ್ಲವು ಜನರಿಗೆ ಇಷ್ಟವಾಗಿದೆ. ಈಗ ಗೌತಮ್ ಮತ್ತು ಭೂಮಿಕಾ ಇಬ್ಬರಿಗೂ ಕೂಡ ಒಬ್ಬರ ಮೇಲೆ ಮತ್ತೊಬ್ಬರಿಗೆ ಲವ್ ಆಗಿದ್ದು, ಇಬ್ಬರು ಅದನ್ನು ಹೇಳಿಕೊಳ್ಳುವುದು ಮಾತ್ರ ಬಾಕಿ ಉಳಿದಿದೆ. ಧಾರವಾಹಿ ಅಂತೂ ರಿಮೇಕ್ ಆಗಿದ್ದರು ಕನ್ನಡ ವೀಕ್ಷಕರಿಗೆ ಬಹಳ ಇಷ್ಟವಾಗಿದೆ ಎಂದರೆ ತಪ್ಪಲ್ಲ.
ಈ ಧಾರಾವಾಹಿ ಮೂಲಕ ನಟಿ ಛಾಯಾ ಸಿಂಗ್ ಅವರು ಕನ್ನಡ ಕಿರುತೆರೆಗೆ ಬಹಳ ವರ್ಷಗಳ ನಂತರ ಕಂಬ್ಯಾಕ್ ಮಾಡಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿ ಇರುವ ರಾಜೇಶ್ ನಟರಂಗ ಅವರು ಕೂಡ ಅಮೃತಧಾರೆ ಮೂಲಕ ಒಳ್ಳೆಯ ಪಾತ್ರದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಈ ಧಾರವಾಹಿಗೆ ದೊಡ್ಡ ಫ್ಯಾನ್ ಬೇಸ್ ಕೂಡ ಇದೆ. ಇದೀಗ ಅಮೃತಧಾರೆ ಫ್ಯಾನ್ಸ್ ಗೆ ಜೀಕನ್ನಡ ವಾಹಿನಿ ಇಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ.
ಅದೇನು ಎಂದರೆ, ಈ ವಾರದಿಂದ ಅಮೃತಧಾರೆ ಧಾರಾವಾಹಿ ವಾರದ 7 ದಿನಗಳು ಕೂಡ ಪ್ರಸಾರವಾಗಲಿದೆ. ಹೌದು ಜೀಕನ್ನಡ ವಾಹಿನಿಯ ಪಾರು, ಹಿಟ್ಲರ್ ಕಲ್ಯಾಣ ಮತ್ತು ಅಮೃತಧಾರೆ ಈ ಮೂರು ಧಾರಾವಾಹಿಗಳು ಕೂಡ ಇಡೀ ವಾರ ಪ್ರಸಾರ ಆಗಲಿದ್ದು, ಅಭಿಮಾನಿಗಳಿಗೆ ಇದು ಬಹಳ ಸಂತೋಷದ ವಿಚಾರ ಆಗಿದೆ. ತಮ್ಮ ಮೆಚ್ಚಿನ ಧಾರಾವಾಹಿಯನ್ನು ಇಡೀ ವಾರ ನೋಡಬಹುದು ಎಂದು ಸಂತೋಷಪಟ್ಟಿದ್ದಾರೆ ಅಭಿಮಾನಿಗಳು.