Dhruva Sarja: ಶ್ರೀರಾಮನ ಆಗಮನದ ದಿನವೇ ಮಕ್ಕಳ ನಾಮಕರಣ ಮಾಡಿದ ನಟ ಧ್ರುವ ಸರ್ಜಾ! ಮಕ್ಕಳಿಗೆ ಇಟ್ಟಿರುವ ಹೆಸರೇನು ಗೊತ್ತಾ?

0 27

Dhruva Sarja: ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದು ಹೆಸರುವಾಸಿ ಆಗಿರುವವರು ನಟ ಧ್ರುವ ಸರ್ಜಾ. ತೆರೆಮೇಲೆ ಇವರ ಡ್ಯಾನ್ಸ್, ಫೈಟ್ಸ್, ಇದೆಲ್ಲವನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಾರೆ. ಮಾಸ್ ಅಂಡ್ ಕ್ಲಾಸ್ ಎರಡು ಥರದ ಅಭಿಮಾನಿಗಳನ್ನು ಸೆಳೆದಿದ್ದಾರೆ ಧ್ರುವ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಧ್ರುವ ಅವರು ನಟಿಸಿದ್ದು ಕೆಲವು ಸಿನಿಮಾಗಳಲ್ಲಿ ಆದರು ಅವರ ಸೆಲೆಕ್ಷನ್ ತುಂಬಾ ಚೆನ್ನಾಗಿದೆ..

ಧ್ರುವ ಅವರು ಈ ಮೊದಲು ಪೊಗರು ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಸೇರಿದೆ. ಇನ್ನು ಧ್ರುವ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಧ್ರುವ ಅವರ ಮೊದಲ ಸಿನಿಮಾವನ್ನು ಸಹ ಎಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಇನ್ನು ಪ್ರೇಮ್ ಅವರ ಕೆಡಿ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ ಧ್ರುವ ಸರ್ಜಾ.

ಧ್ರುವ ಸರ್ಜಾ ಅವರು ತೆರೆಯ ಮೇಲೆ ಮಾತ್ರ ಹೀರೋ ಅಲ್ಲ, ತೆರೆಯ ಹಿಂದೆ ಕೂಡ ಅವರು ಹೀರೋ. ಧ್ರುವ ಅವರು ಕಷ್ಟದಲ್ಲಿರುವ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಇಂದಿಗೂ ಅವರಿಂದ ಸಹಾಯ ಪಡೆಯುವ ಸಾಕಷ್ಟು ಜನರಿದ್ದಾರೆ. ಆದರೆ ತಾವು ಮಾಡುವ ಸಹಾಯದ ಬಗ್ಗೆ ಧ್ರುವ ಸರ್ಜಾ ಅವರು ಎಲ್ಲಿಯೂ ಹೇಳಿಕೊಂಡಿಲ್ಲ, ಅದರಿಂದ ಪ್ರಚಾರ ಕೂಡ ಪಡೆದಿಲ್ಲ.

ಇಂಥ ಒಳ್ಳೆಯ ಮನಸ್ಸಿರುವ ಧ್ರುವ ಅವರು ಯಾವುದೇ ಕೆಲಸ ಮಾಡಿದರು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡುತ್ತಾರೆ. ನಿನ್ನೆ ಇಡೀ ದೇಶವೇ ಸಂಭ್ರಮ ಪಟ್ಟ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ಧ್ರುವ ಸರ್ಜಾ ಅವರು ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೆ ನಾಮಕರಣ ಮಾಡಿದ್ದು ಮಗಳಿಗೆ ರುದ್ರಾಕ್ಷಿ ಎಂದು, ಮಗನಿಗೆ ಹಯಗ್ರೀವ ಎಂದು ಹೆಸರು ಇಟ್ಟಿದ್ದಾರೆ. ಇವರು ಇಟ್ಟಿರುವ ಹೆಸರು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Leave A Reply

Your email address will not be published.