Duniya Vijay: ನುಡಿದಂತೆ ನಡೆದ ನಟ ದುನಿಯಾ ವಿಜಯ್, ಜೈಲಿನಿಂದ 6 ಖೈದಿಗಳನ್ನು ಬಿಡುಗಡೆ ಮಾಡಿಸಿದ್ದಾರೆ!
Duniya Vijay: ನಟ ದುನಿಯಾ ವಿಜಯ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ದುನಿಯಾ ವಿಜಯ್ ಅವರು ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರು. ಹಾಗೆಯೇ ಇವರು ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಬಹಳಷ್ಟು ಜನರಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ ದುನಿಯಾ ವಿಜಯ್. ಇದೀಗ ಇವರು 6 ಖೈದಿಗಳ ಬಿಡುಗಡೆಗೆ ಸಹಾಯ ಮಾಡಿ, ನುಡಿದಂತೆ ನಡೆದಿದ್ದಾರೆ..
ನಟ ದುನಿಯಾ ವಿಜಯ್ ಅವರು ಬಡವರಿಗೆ ಸಹಾಯ ಮಾಡುವುದರಲ್ಲಿ ಮುಂದು. ಕಳೆದ ಸಾರಿ, ಯಾವುದೇ ತಪ್ಪು ಮಾಡದೇ ನಿರಪರಾಧಿ ಆಗಿದ್ದು ಜೈಲಿನಲ್ಲಿರುವ 6 ಖೈದಿಗಳ ಬಿಡುಗಡೆಗೆ ಸಹಾಯ ಮಾಡುವುದಾಗಿ ದುನಿಯಾ ವಿಜಯ್ ಅವರು ಹೇಳಿದ್ದರು. ಅದೇ ರೀತಿ ಈಗ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 6 ಖೈದಿಗಳ ಬಿಡುಗಡೆಗೆ ಸಹಾಯ ಮಾಡಿದ್ದಾರೆ ದುನಿಯಾ ವಿಜಯ್.
ಪರಪ್ಪನ ಅಗ್ರಹಾರದಲ್ಲಿ ತಾಲ್ಲೂ ಮಾಡದೆಯೇ ಜೈಲು ಪಾಲಾಗಿರುವ 6 ಖೈದಿಗಳ ಬಿಡುಗಡೆಗೆ ಸಹಾಯ ಮಾಡಿ, ಅವರೆಲ್ಲರು ಹೊರಗೆ ಬರುವ ಹಾಗೆ ಮಾಡಿದ್ದಾರೆ. ಆ ಖೈದಿಗಳ ಇಡೀ ಕುಟುಂಬ ದುನಿಯಾ ವಿಜಯ್ ಅವರಿಗೆ ಕೃತಜ್ಞವಾಗಿದೆ. ದುನಿಯಾ ವಿಜಯ್ ಅವರ ಈ ಕಾರ್ಯಕ್ಕೆ ಜನರಿಂದ ಕೂಡ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಇವರ ವೃತ್ತಿ ಬಗ್ಗೆ ಹೇಳುವುದಾದರೆ, ಪ್ರಸ್ತುತ ದುನಿಯಾ ವಿಜಯ್ ಅವರು ಭೀಮ ಸಿನಿಮಾ ಮಾಡಿದ್ದು, ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ.