Vinod Prabhakar: ಡಿಬಾಸ್ ದರ್ಶನ್ ಮತ್ತು ಧ್ರುವ ಸರ್ಜಾ ವಿಚಾರಕ್ಕೆ ಮರಿ ಟೈಗರ್ ಎಂಟ್ರಿ, ಡಿಬಾಸ್ ಪರವಾಗಿ ಹೇಳಿದ್ದೇನು ಗೊತ್ತಾ?

0 25

ನಟ ದರ್ಶನ್ ಮತ್ತು ನಟ ಧ್ರುವ ಸರ್ಜಾ ಅವರ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ಗೊತ್ತೇ ಇದೆ. ಈ ವಿಚಾರ ಮೊದಲು ಎಲ್ಲಿಯು ಹೊರಗಡೆ ಬಂದಿರಲಿಲ್ಲ. ಆದರೆ ಸೆಪ್ಟೆಂಬರ್ 29ರಂದು ನಡೆದ ಬಂದ್ ವೇಳೆ ಚಿತ್ರರಂಗದವರು ಕಾವೇರಿ ಮತ್ತು ಕರ್ನಾಟಕದ ರೈತರ ಪರವಾಗಿ ಮಾತನಾಡುವ ವೇಳೆ ನಡೆದ ಒಂದು ಘಟನೆ ಇಂದ ಈ ವಿಚಾರ ಬಯಲಾಯಿತು.

ಅಂದು ವೇದಿಕೆ ಮೇಲೆ ಶಿವಣ್ಣ ಧ್ರುವ ಸರ್ಜಾ ಎಲ್ಲರೂ ಇದ್ದಾಗ ಡಿಬಾಸ್ ದರ್ಶನ್ ಕೂಡ ಅಲ್ಲಿಗೆ ಬಂದರು. ದರ್ಶನ್ ಅವರು ಬಂದಾಗ ಎಲ್ಲರೂ ಎದ್ದು ನಿಂತು ಮಾತನಾಡಿಸಿದರು. ಆದರೆ ಧ್ರುವ ಸರ್ಜಾ ಅವರು ಅಂದು ದರ್ಶನ್ ಅವರೊಡನೆ ಮಾತನಾಡಲಿಲ್ಲ. ಜೊತೆಗೆ ಅವರ ಮುಖದಲ್ಲಿ ನಗು ಕೂಡ ಇರಲಿಲ್ಲ. ಹೀಗಿರುವಾಗ ಧ್ರುವ ಸರ್ಜಾ ಮತ್ತು ಡಿಬಾಸ್ ನಡುವೆ ಏನೋ ಇದೆ ಎನ್ನುವ ಪ್ರಶ್ನೆ ಶುರುವಾಗಿತ್ತು.

ಈ ಪ್ರಶ್ನೆಯನ್ನು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ದಿನವಾದ ಇಂದು ಮಾಧ್ಯಮದವರು ಕೇಳಿದಾಗ ಧ್ರುವ ಸರ್ಜಾ ಅವರು ಎಲ್ಲವು ಸರಿ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ದರ್ಶನ್ ಸರ್ ನಮ್ಮ ಸೀನಿಯರ್, ಅವರ ಮೇಲೆ ನಮಗೆ ಯಾವಾಗಲೂ ಗೌರವ ಇದ್ದೇ ಇರುತ್ತದೆ. ಅವರು ಎದುರಿಗೆ ಇದ್ದಾಗ ಮಾತ್ರ ಅಲ್ಲ, ಅವರು ಹಿಂದೆ ಕೂಡ ನಾವು ಅವರಿಗೆ ಅಷ್ಟೇ ಗೌರವ ಕೊಡ್ತೀವಿ. ಆದರೆ ನನ್ನ ಮನಸ್ಸಿನಲ್ಲಿ ಕೆಲವು ಪ್ರಶ್ನೆ ಇದೆ, ಅದನ್ನೆಲ್ಲ ಅವರ ಹತ್ತಿರ ಕೇಳಬೇಕು..

ಆಗ ನನಗೂ ಕ್ಲಿಯರ್ ಆಗುತ್ತೆ. ಮನಸ್ಸಲ್ಲಿ ಆ ಥರ ಪ್ರಶ್ನೆ ಇದ್ದಾಗ, ಹೊರಗಡೆ ಇನ್ನೊಂದು ಥರ ಇರೋದು ನನಗೆ ಸರಿ ಅನ್ನಿಸಲ್ಲ. ಅದು ನನ್ನ ವ್ಯಕ್ತಿತ್ವ ಅಲ್ಲ..” ಎಂದು ಹೇಳಿದ್ದಾರೆ ಧ್ರುವ ಸರ್ಜಾ. ಈ ವಿಚಾರಕ್ಕೆ ಈಗ ಸ್ಪಷ್ಟನೆ ಸಿಕ್ಕಿದ್ದು ದರ್ಶನ್ ಅವರೊಡನೆ ಏನೋ ಮನಸ್ತಾಪ ಆಗಿದೆ ಎನ್ನುವುದಂತೂ ಗೊತ್ತಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ವಿನೋದ್ ಪ್ರಭಾಕರ್ ಅವರು ಹೇಳಿಕೆ ನೀಡಿದ್ದಾರೆ.

ಡಿಬಾಸ್ ಗಾಗಿ ನಾನು ಇಡೀ ಪ್ರಪಂಚವನ್ನೇ ಎದುರು ಹಾಕಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ಮಾಧ್ಯಮದ ಎದುರು ಮಾತನಾಡಿರುವ ವಿನೋದ್ ಪ್ರಭಾಕರ್ ಅವರು, “ಈ ವಿಷಯ ನನಗೆ ಗೊತ್ತಿಲ್ಲ, 4 ದಿನದಿಂದ ನಾನು ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಇದ್ದೆ. ವಿಷಯದ ಬಗ್ಗೆ ಮೊದಲು ತಿಳಿದುಕೊಂಡು ಆಮೇಲೆ ಅದರ ಬಗ್ಗೆ ಮಾತಾಡ್ತೀನಿ..” ಎಂದು ಹೇಳಿರುವ ವಿನೋದ್ ಪ್ರಭಾಕರ್ ಅವರು ಮುಂದುವರೆದು ಮಾತನಾಡಿ..

“ಒಂದು ವಿಷಯ ಹೇಳಲಾ.. ಒನ್ ಅಂಡ್ ಓನ್ಲಿ ಡಿಬಾಸ್ ಗೋಸ್ಕರ ಇಡೀ ಪ್ರಪಂಚವನ್ನ ಬೇಕಾದರೂ ಎದುರು ಹಾಕಿಕೊಳ್ತೀನಿ..ಅವರು ನನಗೆ ಅಣ್ಣ ಇದ್ದ ಹಾಗೆ, ನನ್ನ ಪ್ರತಿ ಹಂತದಲ್ಲೂ ಅವರು ನನಗೆ ಬೆಂಬಲ ಕೊಟ್ಟಿದ್ದಾರೆ. ಯಾರು ಏನೇ ಅಂದ್ರು ನನಗೆ ಡಿಬಾಸ್ ಮುಖ್ಯ.. ನನಗೆ ಅಣ್ಣನ ಸ್ಥಾನದಲ್ಲಿರುವ ಡಿಬಾಸ್ ಜೊತೆಗೆ ಯಾವಾಗಲೂ ಇರ್ತೀನಿ..” ಎಂದಿದ್ದಾರೆ ಮರಿಟೈಗರ್.

Leave A Reply

Your email address will not be published.