Bigg Boss: ಬಿಗ್ ಬಾಸ್ ಮನೆಯಲ್ಲಿ ಮೊದಲ ಸಾರಿ ಗರಂ ಆದ ಪ್ರತಾಪ್! ಏನಾಗಿದೆ ಗೊತ್ತಾ?

0 22

Bigg Boss: ಬಿಗ್ ಬಾಸ್ ಮನೆಯ 5 ನೇ ವಾರದಲ್ಲಿ ಬಿಗ್ ಬಾಸ್ ಒಂದು ವಿಭಿನ್ನವಾದ ಟಾಸ್ಕ್ ನೀಡಿದ್ದಾರೆ. ಕಳೆದ ವಾರವೇ ಇದ್ದ ತಂಡವನ್ನೇ ಉಳಿಸುವ ಅವಕಾಶ ಸಿಕ್ಕ ಕಾರಣ, ಎಲ್ಲರು ಅದೇ ತಂಡದಲ್ಲಿ ಉಳಿದುಕೊಂಡಿದ್ದಾರೆ. ನಿನ್ನೆ ನೀಡಿದ ಟಾಸ್ಕ್ ಮುಗಿದ ಬಳಿಕ, ಪ್ರತಾಪ್ ನಾಯಕನಾಗಿರುವ ತಂಡದಲ್ಲಿ ಸಣ್ಣದಾಗಿ ಕಿಡಿ ಹತ್ತಿಕೊಂಡಿದ್ದು, ಪ್ರತಾಪ್ ಅವರು ಎಲ್ಲರ ಮೇಲೂ ರೇಗಾಡಿದ್ದಾರೆ. ಮೊದಲ ಬಾರಿ ಗರಂ ಆಗಿದ್ದಕ್ಕೆ ಕಾರಣ ಏನು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಈಗ ಗಂಧದಗುಡಿ ಮತ್ತು ವಜ್ರಕಾಯ ಹೆಸರಿನ ಎರಡು ತಂಡಗಳಿವೆ. ಒಂದು ತಂಡದ ಕ್ಯಾಪ್ಟನ್ ಸಿರಿ ಅವರು ಮತ್ತೊಂದು ತಂಡದ ಕ್ಯಾಪ್ಟನ್ ಪ್ರತಾಪ್. ಕಳೆದ ವಾರ ಇದ್ದ ತಂಡದ ಸದಸ್ಯರೇ ಇದ್ದು, ಕ್ಯಾಪ್ಟನ್ ಗಳು ಮಾತ್ರ ಬದಲಾಗಿದ್ದಾರೆ. ಮೊದಲ ದಿನ ನೀಡಿದ ಟಾಸ್ಕ್ ನಲ್ಲಿ ಪ್ರತಾಪ್ ಅವರ ಗಂಧದಗುಡಿ ತಂಡ ಗೆದ್ದಿತ್ತು, ಎರಡನೇ ದಿನದ ಟಾಸ್ಕ್ ನಲ್ಲಿ ಕೂಡ ಗಂಧದಗುಡಿ ತಂಡವೇ ಗೆದ್ದಿದೆ.

ನಿನ್ನೆ ನೀಡಿದ ಟಾಸ್ಕ್, ಎದುರಾಳಿ ತಂಡದ ಸ್ಪರ್ಧಿಗಳನ್ನು ಮಾನಸಿಕವಾಗಿ ಕುಗ್ಗಿಸುವ ಹಾಗೆ ಮಾಡಬೇಕಾದ ಸವಾಲು ಆಗಿತ್ತು. ಈ ಟಾಸ್ಕ್ 3 ಸುತ್ತುಗಳಲ್ಲಿ ನಡೆಯಿತು, ಮೊದಲ ಸುತ್ತಿನಲ್ಲಿ ಗಂಧದಗುಡಿ ತಂಡ ಗೆದ್ದರೆ, ಎರಡನೇ ಸುತ್ತು ಡ್ರಾ ಆಗಿತ್ತು, ಮೂರನೇ ಸುತ್ತಿನಲ್ಲೂ ಗಂಧದಗುಡಿ ತಂಡವೇ ಗೆದ್ದು, ಪ್ರತಾಪ್ ಅವರ ತಂಡ ಸತತವಾಗಿ ಮೂರು ಟಾಸ್ಕ್ ಗಳಲ್ಲಿ ಜಯಭೇರಿ ಸಾಧಿಸಿದೆ.

ನಿನ್ನೆಯ ಟಾಸ್ಕ್ ನಲ್ಲಿ ಉಸ್ತುವಾರಿ ವಹಿಸಿಕೊಂಡಿರುವವರು, ಎದುರಾಳಿ ತಂಡದ ವ್ಯಕ್ತಿಗಳು ಏನಾದರೂ ತಪ್ಪು ಮಾಡಿದರೆ ಅದನ್ನು ನೋಟ್ ಮಾಡಿಕೊಳ್ಳಬೇಕಿತ್ತು. ಈ ಕೆಲಸ ವಹಿಸಿದ್ದ ಪ್ರತಾಪ್, ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ, ಎದುರಾಳಿ ತಂಡದವರು ಮಾಡಿದ ತಪ್ಪನ್ನು ಸರಿಯಾಗಿ ನೋಟ್ ಮಾಡಿಕೊಳ್ಳಲಿಲ್ಲ ಎಂದು ಪ್ರತಾಪ್ ಅವರ ಮೇಲೆ ಎಲ್ಲರೂ ರೇಗುವುದಕ್ಕೆ ಶುರು ಮಾಡಿದರು. ಇದರಿಂದ ಪ್ರತಾಪ್ ಅವರು ಕೂಡ ರೈಸ್ ಆದರು.

ನನ್ನ ಕೆಲಸ ಸರಿಯಾಗಿ ಮಾಡಿದ್ದೀನಿ, ಫೇರ್ ಗೇಮ್ ಆಡಿದ್ದೀನಿ, ಎಲ್ಲರೂ ನನ್ನ ಮೇಲೆ ಎಗರೋಕೆ ಬರಬೇಡಿ ಎಂದು ಜೋರಾಗಿ ಹೇಳಿ ಗುಡುಗಿದರು ಪ್ರತಾಪ್. ಇದೇ ಮೊದಲ ಸಾರಿ ಪ್ರತಾಪ್ ಅವರು ಈ ರೀತಿ ವರ್ತಿಸಿದ್ದು, ನೆಟ್ಟಿಗರು ಪ್ರತಾಪ್ ಅವರಿಗೆ ಸಪೋರ್ಟ್ ಮಾಡುತ್ತಿದ್ದು, ಎಲ್ಲರೂ ಅವರನ್ನೇ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದಾರೆ, ಇಷ್ಟವಿಲ್ಲದೆ ಹೋದರೆ ಯಾಕೆ ಕ್ಯಾಪ್ಟನ್ ಮಾಡಬೇಕಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.

Leave A Reply

Your email address will not be published.