Puneeth Rajkumar: ಅಪ್ಪು ಹೆಸರಲ್ಲಿ ಇನ್ನು 5 ಆಂಬ್ಯುಲೆನ್ಸ್, ನಟ ಪ್ರಕಾಶ್ ರಾಜ್ ಗೆ ಸಾಥ್ ಕೊಟ್ಟ ರಾಕಿ ಭಾಯ್

0 39

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಸುಮಾರು 2 ವರ್ಷ ಆಗುತ್ತಿದೆ, ಆದರೆ ಇಂದಿಗೂ ಕೂಡ ಅಪ್ಪು ಅವರನ್ನು ಯಾವ ಅಭಿಮಾನಿ ಕೂಡ ಮರೆತಿಲ್ಲ. ಅಪ್ಪು ಅವರಂದ್ರೆ ಎಲ್ಲರಿಗು ಅಷ್ಟು ಪ್ರೀತಿ, ಎಲ್ಲರಿಗೂ ಅಷ್ಟು ಹತ್ತಿರವಾಗಿದ್ದಾರೆ. ಯಾವುದೇ ಕಾರ್ಯಕ್ರಮ ಆಗಲಿ ಅಪ್ಪು ಅವರನ್ನು ನೆನೆಯದೆ ನಡೆಯುವುದಿಲ್ಲ ಎಂದ್ ಹೇಳಬಹುದು. ಇದೀಗ ಅಪ್ಪು ಅವರ ಹೆಸರಿನಲ್ಲಿ ಸರ್ಕಾರ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿದೆ..

ಇಡೀ ದೊಡ್ಮನೆ ಕುಟುಂಬ ಜನರಿಗೆ ತುಂಬಾ ಹತ್ತಿರವಾಗಿದೆ, ಅಣ್ಣಾವ್ರು, ಪಾರ್ವತಮ್ಮ ಅವರು, ಶಿವಣ್ಣ ಅವರು ರಾಘಣ್ಣ ಅವರು ಮತ್ತು ಅಪ್ಪು ಅವರು ಇವರೆಲ್ಲರೂ ಕೂಡ ಸರಳತೆಗೆ ಮತ್ತೊಂದು ಹೆಸರಾಗಿ ಬದುಕಿ ಜನರಿಗೆ ಮಾದರಿ ಆಗಿರುವವರು. ಇವರೆಲ್ಲರು ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಾ, ಒಳ್ಳೆಯತನ ಸರಳತೆ ಇವುಗಳನ್ನು ಪಾಲಿಸುವ ಹಾಗೆ ಜನರಿಗೆ ಪ್ರೇರಣೆ ನೀಡಿದವರು. ಅಪ್ಪು ಅವರ ಬಗ್ಗೆ ಅಂತೂ ಎಷ್ಟು ಹೇಳಿದರೂ ಕಡಿಮೆಯೇ.

ಅಪ್ಪು ಅವರು ಇದ್ದಾಗ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಲೆಕ್ಕಕ್ಕಿಲ್ಲ, ಅಪ್ಪು ಅವರು ತಾವು ಸಹಾಯ ಮಾಡಿದ್ದನ್ನು ಎಲ್ಲಿಯು ಹೇಳುತ್ತಿರಲಿಲ್ಲ, ಜನರಿಗೆ ಹೇಳುವುದು ಬೇಡ ಎನ್ನುತ್ತಿದ್ದರು. ಆದರೆ ಅವರು ಹೋದ ಬಳಿಕ ಸಾಕಷ್ಟು ಜನ ಅಪ್ಪು ಅವರಿಂದ ನಮಗೆ ಸಹಾಯ ಆಗಿತ್ತು ಎಂದು ತಾವೇ ಬಂದು ಹೇಳುತ್ತಿದ್ದರು. ಆಗಲೇ ಅಪ್ಪು ಅವರು ಎಂಥಾ ದೇವತಾ ಮನುಷ್ಯ ಎಂದು ಜನರಿಗು ಗೊತ್ತಾಗಿದ್ದು. ಹಲವು ಕಾರಣಗಳಿಂದ ಅಪ್ಪು ಅವರು ಜನರ ಮನಸ್ಸಿಗೆ ಬಹಳ ಹತ್ತಿರವಾಗಿದ್ದಾರೆ.

ಇಂಥ ಅಪ್ಪು ಅವರು ಹೋಗುವಾಗಲು ಜನರಿಗೆ ನೇತ್ರದಾನ ಮಾಡುವ ಸಂದೇಶ ಕೊಟ್ಟು ಹೋದರು, 2021 ರಿಂದ ಈಗಿನವರೆಗೂ ನಾರಾಯಣ ಹೃದಯಾಲದಲ್ಲಿ ಸುಮಾರು 1.40 ಲಕ್ಷ ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿರುವ ಅಪ್ಪು ಅವರ ಹೆಸರಲ್ಲಿ ಇದೀಗ ಮತ್ತೊಂದು ಒಳ್ಳೆಯ ಕೆಲಸ ಆಗಿದೆ.

ಕಳೆದ ವರ್ಷ ಗಂಧದಗುಡಿ ಪ್ರೀರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ಅಪ್ಪು ಹೆಸರಲ್ಲಿ ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್ ಸೇವೆ ಶುರು ಮಾಡುವ ಬಗ್ಗೆ ಮಾತನಾಡಿದ್ದರು, ಚಿರಂಜೀವಿ ಅವರು ಒಂದು ಆಂಬ್ಯುಲೆನ್ಸ್ ಕೊಟ್ಟಿದ್ದಾರೆ ಎಂದು ಹೇಳಿದರು. ಆಗ ಯಶ್ ಅವರು ತಾವು ಕೂಡ ಕೈಜೋಡಿಸುವುದಾಗಿ ಹೇಳಿದರು.

ಆ ಮಾತನ್ನು ಯಶ್ ಅವರು ಉಳಿಸಿಕೊಂಡಿದ್ದು, ಇದೀಗ ಯಶ್ ಅವರು ಮತ್ತು ಕೆವಿಎನ್ ಸಂಸ್ಥೆಯ ನಿರ್ಮಾಪಕರು, ಅಪ್ಪು ಅವರ ಹೆಸರಲ್ಲಿ ಇನ್ನು 5 ಆಂಬ್ಯುಲೆನ್ಸ್ ಗಳನ್ನು 5 ಜಿಲ್ಲೆಗಳಿಗೆ ನೀಡಿದ್ದಾರೆ. ಈ ಗುಡ್ ನ್ಯೂಸ್ ಅನ್ನು ಪ್ರಕಾಶ್ ರಾಜ್ ಅವರು ಶೇರ್ ಮಾಡಿ, ಸಂತೋಷ ಹಂಚಿಕೊಂಡಿದ್ದಾರೆ. “ಕನ್ನಡ ರಾಜ್ಯೋತ್ಸವದ ಸಂಭ್ರಮದಂದು ..ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ .. ಪ್ರೀತಿಯ @TheNameIsYash ಹಾಗು @KvnProductions ವೆಂಕಟ್ ರವರ ಸಹಕಾರದಿಂದ ನಮ್ಮೆಲ್ಲರ #ಅಪ್ಪು ವಿನ ಸವಿ ನೆನಪಲ್ಲಿ  ಮತ್ತೈದು  #AppuExpress Ambulance ಗಳು.  🙏🏿🙏🏿🙏🏿..” ಎಂದು ಟ್ವೀಟ್ ಮಾಡಿದ್ದಾರೆ ನಟ ಪ್ರಕಾಶ್ ರಾಜ್.

Leave A Reply

Your email address will not be published.